ಕಾಸರಗೋಡು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆದ ಕೆಲವು ಮಹತ್ತರವಾದ ಬದಲಾವಣೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಅಧಿಕಾರಿಗಳ ವರ್ಗಾವರ್ಗಿ ನಡೆದಿದೆ. ಜಿಲ್ಲೆಯಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ (ಎಸ್.ಐ) ಗಳಿಗೆ ಸರ್ಕಲ್ ಇನ್ಸ್ಪೆಕ್ಟರ್ ಗಳಾಗಿ ಭಡ್ತಿ ಲಭಿಸಿದರೆ ಹಲವು ಇನ್ಸ್ಪೆಕ್ಟರ್ ಗಳಿಗೆ ವರ್ಗಾವಣೆ ಉಂಟಾಗಿದೆ.
ಜಿಲ್ಲೆಯ ಸೈಬರ್ ಎಸ್.ಐ. ಎಂ.ವಿ.ಶ್ರೀದಾಸ್, ಚಂದೇರ ಎಸ್.ಐ.ಕೆ.ಪು.ಸತೀಶ್ ಎಂಬಿವರಿಗೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಲಭಿಸಿದೆ. ಎಂ.ವಿ.ಶ್ರೀದಾಸರನ್ನು ಬೇಕಲ, ಕೆ.ಪಿ.ಸತೀಷರನ್ನು ವೆಳ್ಳರಿಕುಂಡ್ ನಲ್ಲೂ ಇನ್ಸ್ಪೆಕ್ಟರ್ ಆಗಿ ನೇಮಿಸಲಾಯಿತು. ಅಲ್ಲಿದೆ ಚಿಮೇನಿ ಇನ್ಸ್ಪೆಕ್ಟರ್ ಎ.ಅನಿಲ್ ಕುಮಾರ್ ಆದೂರಿಗೆ, ವೆಳ್ಳರಿಕುಂಡ್ ಇನ್ಸ್ಪೆಕ್ಟರ್ ಟಿ.ಕೆ.ಮುಕುಂದನ್ ಚಿಮೇನಿಗೆ, ಬೇಕಲ ಇನ್ಸ್ಪೆಕ್ಟರ್ ಕೆ.ಪಿ.ಶೈನ್ ಅಂಬಲತ್ತರ ಠಾಣೆಗೂ ವರ್ಗಾಯಿಸಲಾಗಿದೆ
0 Comments