Ticker

6/recent/ticker-posts

ಮಾನ್ಯ ಶ್ರೀ ವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ಗೊಲ್ಲ ಸಮಾಜ ಸಂಗಮ


ಮಾನ್ಯ : ಗೊಲ್ಲ ಸಮಾಜವು ತನ್ನದೇ ಆದ ಆಚಾರ ವಿಚಾರಗಳನ್ನು ಹೊಂದಿದ್ದು ಅದನ್ನು ಮುಂದುವರಿಸುವ ಜೊತೆಗೆ ಸಮಾಜವನ್ನು ಇನ್ನಷ್ಟು ಸದೃಢಗೊಳಿಸುವ ಅವಶ್ಯಕತೆ ಇದೇ ಎಂಬ ಆಶಯದೊಂದಿಗೆ ಗೊಲ್ಲ ಸಮಾಜ ಸಂಘ ಮಾನ್ಯ ಇದರ ಆಶ್ರಯದಲ್ಲಿ ಗೊಲ್ಲ ಸಮಾಜ ಸಂಗಮ ಕಾರ್ಯಕ್ರಮ ಜರಗಿತು.


 ಮಾನ್ಯ ಶ್ರೀ ವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮಕ್ಕೆ ರಾಮದಾಸ ರವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. 


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತಾಧ್ಯಕ್ಷರಾದ ಅಡ್ವ. ಮೋಹನ್ ಮಾನ್ಯ ವಹಿಸಿದರು. ವೇದಿಕೆಯಲ್ಲಿ ರಾಮದಾಸ್ ಮಾನ್ಯ, ಉಮಾನಾಥ ಕಾಸರಗೋಡು, ಜನಾರ್ಧನ ಎಂ ಎಚ್, ನಿರಂಜನ್ ಮಾನ್ಯ, ಉಪಸ್ಥಿತರಿದ್ದು ಶುಭಾಶಂಸನೆ ನೀಡಿದರು. ನವೀನ್ ಚಂದ್ರ ಮಾಸ್ತರ್ ಮಾನ್ಯ ಪ್ರಾಸ್ತಾವನೆಯೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಯೋಗೀಶ್ ಗೊಲ್ಲ ವಂದಿಸಿದರು. ಮಂಜುನಾಥ ಡಿ ಮಾನ್ಯ ನಿರೂಪಿಸಿದರು. ಗೀತಾ ಈಶ್ವರ ಮತ್ತು ಜಯಲಕ್ಷ್ಮಿ ಸಿ ಎಚ್ ರವರು ಪ್ರಾರ್ಥನೆ ಹಾಡಿದರು.

Post a Comment

0 Comments