ಕಾಸರಗೋಡು: ತುರ್ತುಪರಿಸ್ಥಿತಿಯ ವಿರುದ್ದ ಬ್ಯಾಲೆಟ್ ಮೂಲಕ ತೀರ್ಪುನೀಡಿ ನಷ್ಟವಾದ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಭಾರತದ ಹತ್ತು ರಾಜ್ಯಗಳು ಮುಖ್ಯ ಪಾತ್ರವಹಿಸಿವೆ ಎಂದು ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೆ ಹೇಳಿದರು.ಅವರು 1975 ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ರಕ್ಷಣಾ ಹೋರಾಟ ಸ್ಮೃತಿ ಸಮಿತಿ ಆಶ್ರಯದಲ್ಲಿ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆದ ಸ್ಮೃತಿ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಾಕ್ಷರತೆಯಲ್ಲಿ ಒಂದನೇ ಸ್ಥಾನದಲ್ಲಿರುವ ಕೇರಳದಲ್ಲಿ ಅಂದು 20 ಸೀಟುಗಳೂ ಕಾಂಗ್ರೆಸ್ ಗೆದ್ದಿದೆ. ಆದರೆ 10 ರಾಜ್ಯಗಳಲ್ಲಿ ಕೇವಲ ಇಬ್ಬರು ಕಾಂಗ್ರೆಸಿಗರು ಮಾತ್ರ ಗೆಲುವು ಸಾಧಿಸಿದರು. ಜನತಾ ಪಾರ್ಟಿ ಅಂದು ಅಧಿಕಾರಕ್ಕೆ ಬರದೇ ಇರುತ್ತಿದ್ದರೆ ಭಾರತದ ರಾಜಕೀಯ ಚಿತ್ರ ಬೇರೆಯೇ ಇರುತ್ತಿತ್ತು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಹಲವು ತುರ್ತುಪರಿಸ್ಥಿತಿ ಹೋರಾಟಗಾರರು ಭಾಗವಹಿಸಿದರು. ಸಂಸ್ಕೃತ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ದಿನೇಶ್ ಕಾಮತ್ ಮುಖ್ಯ ಭಾಷಣ ಮಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಆರ್.ಎಸ್
ಎಸ್.ಕಾಞಂಗಾಡ್ ಜಿಲ್ಲಾ ಸಂಘಚಾಲಕ್ ಕೆ.ದಾಮೋದರನ್, ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ತರ್, ಅಡ್ವ.ಕೆ.ಕರುಣಾಕರನ್ ಮಾಸ್ತರ್, ವಿ.ರವೀಂದ್ರನ್ ಮೊದಲಾದವರು ಮಾತನಾಡಿದರು
0 Comments