Ticker

6/recent/ticker-posts

ಕಾರನ್ನು ಹಿಂದಿಕ್ಕಿದ ಕೋಪದಿಂದ ಇನ್ನೊಂದು ಕಾರಿನಲ್ಲಿದ್ದ ಯುವಕರನ್ನು ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆ


 ಮಂಜೇಶ್ವರ: ಕಾರನ್ನು ಹಿಂದಿಕ್ಕಿದ ಕೋಪದಿಂದ ಇನ್ನೊಂದು ಕಾರಿನಲ್ಲಿದ್ದ ಯುವಕರನ್ನು ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆಗೈದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಪಾವೂರು ಕೋಡಿ ಹೌಸ್ ನಿವಾಸಿ ಅಬ್ದುಲ್ ಖಾದರ್ ನೀಡಿದ ದೂರಿನಂತೆ ನಾಲ್ಕು ಮಂದಿಯ ವಿರುದ್ದ ಹತ್ಯಾ ಯತ್ನ ಪ್ಗಕರಣದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಹೊಸಂಗಡಿಯ ಯಾಕೂಬ್, ಪಾವೂರಿನ ಮುಬಾರಕ್, ಮಚ್ಚಂಪಾಡಿಯ  ಜಬ್ಬಾರ್,  ಮಂಜೇಶ್ವರದ ಅಶ್ರಫ್ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ.

   ನಿನ್ನೆ (ಶುಕ್ರವಾರ) ಸಾಯಂಕಾಲ ವರ್ಕಾಡಿ ಮಚ್ಚಂಪಾಡಿಯಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ಖಾದರ್ ಹಾಗೂ ಮುಹಮ್ಮದ್ ಜೌಹರ್ ಪ್ರಯಾಣಿಸುತ್ತಿದ್ದ ಕಾರು ಆರೋಪಿಗಳ ಕಾರನ್ನು ಹಿಂದಿಕ್ಕಿರುವುದೇ ಹಲ್ಲೆಗೆ ಕಾರಣವೆನ್ನಲಾಗಿದೆ. ಇಬ್ಬರನ್ನೂ ತಡೆದು ನಿಲ್ಲಿಸಿದ ಆರೋಪಿಗಳು ಮರದ ದೊಣ್ಣೆಯಿಂದ ಹಾಗೂ ಇತರ ಆಯುಧಗಳಿಂದ ಹಲ್ಲೆಗೈದರೆಂದು ದೂರಲಾಗಿದೆ

Post a Comment

0 Comments