Ticker

6/recent/ticker-posts

ಪೆರ್ಮುದೆಯಲ್ಲಿ ಕುಡಾಲ್ಡ ಜವ್ವಣೆರ್ ವಾಟ್ಸ್ಆ್ಯಪ್ ಗ್ರೂಪಿನ ವಿದ್ಯಾ ಸ್ಪೂರ್ತಿ ಯೋಜನೆಯ ಪ್ರತಿಭೋತ್ಸವ

 



ಪೆರ್ಮುದೆ : ಕುಡಾಲ್ಡ ಜವ್ವಣೆರ್ ವಾಟ್ಸ್ಆ್ಯಪ್ ಗ್ರೂಪಿನ ವಿದ್ಯಾ ಸ್ಪೂರ್ತಿ ಯೋಜನೆಯ ಕುಡಾಲು ಗ್ರಾಮದ ವಿದ್ಯಾರ್ಥಿಗಳ ಪ್ರತಿಭೋತ್ಸವ ವು ಪೆರ್ಮುದೆ BPP A L P ಶಾಲೆಯಲ್ಲಿ ಜರಗಿತು.


ಗ್ರೂಪಿನ ಪ್ರಧಾನ ಎಡ್ಮಿನ್, ಸನ್ಮಾನ್ಯ ಕುಡಾಲುಗುತ್ತು ಶ್ರೀ ಗಣೇಶ್ ರೈ ಮುಂಬಯಿ ಯವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭವನ್ನು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ N ಶಂಕರನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕುಡಾಲುಮೇರ್ಕಳ ಗ್ರಾಮದ SSLC  ,PUC, ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದ ಪ್ರತಿಭೆಗಳಿಗೆ ಹಾಗೂ LSS  USS ಸ್ಕಾಲರ್ಶಿಪ್ ಪರೀಕ್ಷೆ ತೇರ್ಗಡೆಯಾದ ಹಾಗೂ ನವೋದಯ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ಮರಣಿಕೆ, ಉತ್ತಮವಾದ ಲೇಖನಿ, ಹಾಗೂ ಕರ್ನಾಟಕದ ಸಮಗ್ರ ಇತಿಹಾಸವಿರುವ ಗ್ರಂಥದೊಂದಿಗೆ ಪುರಸ್ಕರಿಸಲಾಯಿತು.

ಸಮಾರಂಭದಲ್ಲಿ ಗುರುವರ್ಯರಾದ ಖಾದರ್ ಮಾಸ್ಟ್ರು, ಡೋನ್ ಬೋಸ್ಕೋ ಶಾಲೆಯ ಮುಖ್ಯ ಶಿಕ್ಷಕರಾದ ಸನ್ಮಾನ್ಯ ಫೀಠರ್ ರೋಡ್ರಿಗೆಸ್, ಅಂಗಡಿಮೊಗರು ಸೇವಾ ಸಹಕಾರಿ ಬೇಂಕಿನ ಪ್ರಧಾನ ಕಾರ್ಯದರ್ಶಿ ಶ್ರೀ ವಿಠಲ್ ರೈ ಮಂಟಪ್ಪಾಡಿ, ಪೆರ್ಮುದೆ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸದಾಶಿವ ಬಾಲಮಿತ್ರ, ಗ್ರೂಪಿನ ಆಧಾರ ಸ್ತಂಭ ಶ್ರೀ ಲಕ್ಷ್ಮೀಶ ಆಳ್ವ ಕುಡಾಲುಗುತ್ತು, ಶ್ರೀ ಅಶೋಕ ಭಂಡಾರಿ, ಕುಡಾಲುಗುತ್ತು ಶ್ರೀ ಶ್ರೀಧರ ಶೆಟ್ಟಿ ಕುಡಾಲುಗುತ್ತು, ಶ್ರೀ ಹರೀಶ್ ಭಂಡಾರಿ ಸಿರಿಬಾಗಿಲು,ಶ್ರೀಮತಿ ಶಮಿತಾ ಉದಯ ಶೆಟ್ಟಿ ಕುಡಾಲು ಭಂಡಾರಗುತ್ತು ಶ್ರೀ ಸದಾಶಿವ ಭಂಡಾರಿ ಕನಕಪ್ಪಾಡಿ ಸಾಮಾಜಿಕ ನೇತಾರ, ರೋನಿ ಚೇವಾರು, ಮೊದಲಾದ ಗಣ್ಯರು ಭಾಗವಹಿಸಿದ ಕುಡಾಲ್ಡ ಜವ್ವಣೆರ್ ವಿದ್ಯಾ ಸ್ಪೂರ್ತಿ ಪ್ರತಿಭೋತ್ಸವದಲ್ಲಿ ನಾಲ್ಕು ಜನ ಆಶಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸಹಾಯಹಸ್ತವನ್ನು ವಿತರಿಸಲಾಯಿತು. BPP ALP ಶಾಲೆಯ ಒಂದನೇ ಕ್ಲಾಸಿನ ವಿದ್ಯಾರ್ಥಿಗಳಿಗೆ ಶ್ರೀ ಲಕ್ಷ್ಮೀಶ ಆಳ್ವರ ಪ್ರತ್ಯೇಕ ಅನುದಾನದಲ್ಲಿ ಕೊಡೆ ವಿತರಿಸಲಾಯಿತು ಪೆರ್ಮುದೆ LULU ಸೌಂಡ್ಸ್ & ಲೈಟಿಂಗ್ಸ್ ನ ಮಾಲಕರಾದ ಗೌರವಾನ್ವಿತ M.A ಅಲಿ ಹಾಗೂ ಶೀಯಾ ಮೊಬೈಲ್ ಸೆಂಟರ್ ನ ಮಾಲಕರಾದ  ಸನ್ಮಾನ್ಯ ರಹೀಂ ARS ರ ವರಿಬ್ಬರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಗ್ರೂಪಿನ ವತಿಯಿಂದ ಸನ್ಮಾನಿಸಲಾಯಿತು

ಗ್ರೂಪಿನ ಇನ್ನೋರ್ವ ಪ್ರಧಾನ ಎಡ್ಮಿನ್ ಶ್ರೀ ಶಿವಪ್ರಸಾದ್ ಶೆಟ್ಟಿ  ಸ್ವಾಗತಿಸಿದರು. ಕುಡಾಲು ಭಂಡಾರ ಗುತ್ತು ಶ್ರೀ ಅನಿಲ್ ಶೆಟ್ಟಿ ನಿರೂಪಿಸಿದರು. ದಿನೇಶ್ V  ರೈ BG ವಂದಿಸಿದರು.

Post a Comment

0 Comments