Ticker

6/recent/ticker-posts

Ad Code

ಅಸೌಖ್ಯದಿಂದ ಸಹೃದಯರ ಸಹಾಯ ಕೋರಿದ್ದ ವ್ಯಕ್ತಿ ನಿಧನ

 

ಉಳಿಯತ್ತಡ್ಕ :  ಕಳೆದ ಕೆಲವು ವರ್ಷಗಳಿಂದ ಅಸೌಖ್ಯಕ್ಕಿಡಾಗಿ ಮಲಗಿದ ಸ್ಥಿತಿಯಲ್ಲಿದ್ದ ಪುತ್ತಿಗೆ ದಿವಂಗತ ರಾಘವ ಆಚಾರ್ಯರ ಪುತ್ರ ಕುಶ (45) ಇಂದು  ಬೆಳಗ್ಗೆ ನಿಧನರಾದರು. ಮೃತರು ಉಳಿಯತ್ತಡ್ಕ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಹಿಂದೆ ಮರದ ಕೆಲಸ ಮಾಡುತ್ತಿದ್ದ ಇವರು ವರ್ಷಗಳ ಹಿಂದೆ ಅಸೌಖ್ಯಕ್ಕಿಡಾಗಿದ್ದರು. ಮೃತರು ಪತ್ನಿ ಸುಜಾತ ಮಗ ಯಶ್ವಿನ್ ಮತ್ತು ಸಹೋದರರು ಸಹೋದರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments