ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿಗೆ ಗಡೀಪಾರು ಆದೇಶದ ಬೆನ್ನಲ್ಲೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿರುವ ಬಗ್ಗೆ ಪೋಲಿಸರಿಗೆ ಅನುಮಾನ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಆದೇಶದ ಬೆನ್ನಲ್ಲೇ ಉಜಿರೆಯ ತಿಮರೋಡಿ ಮನೆಗೆ ಗಡೀಪಾರು ಆದೇಶ ನೀಡಲು ಬೆಳ್ತಂಗಡಿ ಪೊಲೀಸರು ತೆರಳಿದ್ದಾರೆ. ತಿಮರೋಡಿ ಮನೆಯಲ್ಲಿ ಇಲ್ಲದ ಕಾರಣ ಪೊಲೀಸರು ವಾಪಾಸ್ ಬಂದಿದ್ದು, ಗಡೀಪಾರು ಮಾಹಿತಿ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ತಿಮರೋಡಿ ತೆರಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

0 Comments