ಪೆರ್ಲ : ಬಣ್ಣುತ್ತಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 39ನೇ ವಾರ್ಷಿಕೋತ್ಸವ ಡಿ 20ರಂದು ಜರಗಲಿದೆ. ಇದರ ಅಂಗವಾಗಿ ಅಂದು ಬೆಳಿಗ್ಗೆ ಗಂಟೆ 8 ಗಂಟೆಗೆ ದೀಪ ಪ್ರಜ್ವಲನೆ, ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ, ಬಣ್ಣುತ್ತಡ್ಕ ಇವರಿಂದ ಭಜನೆ, 9 ಗಂಟೆಗೆ ಮಾತೃಶ್ರೀ ಭಜನಾ ಸಂಘ, ಕೂಡ್ಲು ಇವರಿಂದ ಭಜನೆ, 10 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 10.45 ರಾಧಾಕೃಷ್ಣ ಪಳ್ಳಕಾನ ಮತ್ತು ಶ್ರೀ ರಾಮಚಂದ್ರ ಭಟ್ ಮತ್ತು ಬಳಗ ಅವರಿಂದ ಭಕ್ತಿಸಂಗೀತ, ಮಧ್ಯಾಹ್ನ 12.30ಗಂಟೆಗೆ ಮಹಾಪೂಜೆ, ಶರಣಂವಿಳಿ, ಪ್ರಸಾದ ವಿತರಣೆ ,1 ಗಂಟೆಗೆ ಅನ್ನಸಂತರ್ಪಣೆ, ಮಧ್ಯಾಹ್ನ 1.15ರಿಂದ ಗೌರವ್ ಡಿ. ಶೆಟ್ಟಿ ಮತ್ತು ಬಳಗ, ಅಡ್ಯಾರ್ - ಮಂಗಳೂರು ಇವರಿಂದ ಭಜನಾ ಸಂಕೀರ್ತನೆ, ಸಂಜೆ 3 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ, ಅಗಲ್ಪಾಡಿ ಅವರಿಂದ ಭಜನೆ, ಸಾಯಂ 5.ಗಂಟೆಯಿಂದ ಮನು ಪಣಿಕ್ಕರ್ ಮತ್ತು ಸಂಘ ಬೆದ್ರಡಿ-ಅಗಲ್ಪಾಡಿ, ಇವರಿಂದ ತಾಯಂಬಕಂ 6ಗಂಟೆಗೆ ಶ್ರೀ ದುರ್ಗಾ ಬಂಟರ ಮಹಿಳಾ ಸಂಘ, ಪೆರ್ಲ ಇವರಿಂದ ಭಜನೆ, ಸಾಯಂ, ಗಂಟೆ 6.30ರಿಂದ ಬಣ್ಣುತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಶಾಲೆಯ ಪರಿಸರದಿಂದ ಮಂದಿರಕ್ಕೆ ಉಲ್ಪೆ ಮೆರವಣಿಗೆ, ವಿಶೇಷ ಆಕರ್ಷಣೆ ನಾಸಿಕ್ ಬ್ಯಾಂಡ್ ಶ್ರೀ ಶಾಸ್ತಾ ನಾಸಿಕ್ ಬ್ಯಾಂಡ್, ಬಣ್ಣುತ್ತಡ್ಕ ರಾತ್ರಿ 8.30ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಬಣ್ಣುತ್ತಡ್ಕ ಮತ್ತು ಸ್ವಾಮಿಗಳಿಂದ ಭಜನೆ,ರಾತ್ರೆ 9.30 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 9.45ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಕಳುವಾರು, ಬಾಳ, ಮಂಗಳೂರು-ಇವರಿಂದ ಯಕ್ಷಗಾನ ಮತ್ತು ತುಳು ಚಲನಚಿತ್ರ ರಂಗದ ಕಲಾವಿದ ಶ್ರೀ ರವಿಕುಮಾರ್ ಸುರತ್ಕಲ್ ರಚನೆಯ 'ನಾಗ ತಂಬಿಲ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

0 Comments