ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ಅಭಿನಯಿಸಿ ನಿರ್ಮಿಸಿದ "ಮೌಲ್ಯ" ಕಿರುಚಿತ್ರ ಜ.31ರಂದು ಸಂಜೆ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ. ಆಧುನಿಕ ಸಮಾಜದಲ್ಲಿ ಕುಸಿಯುತ್ತಿರುವ ಜೀವನ ಮೌಲ್ಯಗಳ ಕಥಾಹಂದರದ ಕಿರುಚಿತ್ರದಲ್ಲಿ 7ನೇ ತರಗತಿ ವಿದ್ಯಾರ್ಥಿಗಳಾದ ರೇಷ್ಮಾ ಬಿ, ಸಮೃದ್ಧ್ ಬಿ.ಆರ್, ನಿನಾದ್, ಯಶಿತಾ ಪಿ.ಜಿ, ಶಿಕ್ಷಕರಾದ ಶ್ರೀಹರಿ ಶಂಕರ ಶರ್ಮಾ, ವೆಂಕಟ ವಿದ್ಯಾಸಾಗರ್ ಅಭಿನಯಿಸಿದ್ದಾರೆ. ಶಿಕ್ಷಕ ಮಂಜುನಾಥ ಪಿ.ನಿರ್ದೇಶನದ ಕಿರುಚಿತ್ರವನ್ನು ಶಾಲೆಯ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿದೆ. ಸ್ವರ್ಗ ವಿಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಕಿರು ಚಿತ್ರವನ್ನು ವೀಕ್ಷಿಸಬಹುದು.

0 Comments