Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೆದ್ರಂಪಳ್ಳ ನಡುಬೈಲಿನಲ್ಲಿ ಮನೆ ಬೆಂಕಿಗಾಹುತಿ : ಅಪಾರ ನಾಶ ನಷ್ಟ

                                   

ಪೆರ್ಲ : ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿ ಹೆಂಚಿನ ಮನೆಯೊಂದು ಶಾರ್ಟ್ ಸರ್ಕ್ಯೂಟ್ ಕಾರಣ ಉರಿದು ಸಂಪೂರ್ಣ ಬೂದಿಯಾದ ಘಟನೆ  ಇಂದು ಸಂಜೆ 4ಗಂಟೆಗೆ ನಡೆದಿರುವುದಾಗಿ ವರದಿಯಾಗಿದೆ. ಪೆರ್ಲ ಪೇಟೆಯಲ್ಲಿ ವಾಹನ‌ ಬಾಡಿಗೆ ನಡೆಸುತ್ತಿರುವ ಚಾಲಕರಾದ  ರಮೇಶ್ಚಂದ್ರ ರೈ ಎಂಬವರ ಮನೆ ಇದಾಗಿದೆ. ಇವರು ಸಂಕ್ರಮಣವಾದ ಕಾರಣ ತರವಾಡು ಸಂಬಂಧ ಕಾರ್ಯಕ್ಕಾಗಿ ಪೆರುವಾಯಿಯ ದೇವಸ್ಥಾನವೊಂದಕ್ಕೆ ತೆರಳಿದ್ದು ಪತ್ನಿ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೆ ತೆರಳಿದ ಕಾರಣ ಮನೆಯಲ್ಲಿ ಯಾರು ಇಲ್ಲವಾದ್ದರಿಂದ ಘಟನೆ ಅರಿವಿಗೆ ಬರುವಾಗ ಬೆಂಕಿ ಪೂರ್ತಿ ಹತ್ತಿಕೊಂಡಿದೆ.

 

ಮನೆಯೊಳಗಿನ ಪ್ರಿಡ್ಜ್ ನ  ಕರೆಂಟ್ ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ. ಕಾಸರಗೋಡಿನಿಂದ ಅಗ್ನಿಶಾಮಕ ದಳದವರು ಆಗಮಿಸಿ ಊರವರೊಂದಿಗೆ ಸೇರಿ ಬೆಂಕಿ ನಂದಿಸಿದ್ದರು. ಮನೆಯೊಳಗೆ ಇದ್ದ ಬೆಲೆ ಬಾಳುವ ವಸ್ತು ಸಹಿತ ಬಟ್ಟೆ ಬರೆಗಳು ಬೆಂಕಿಗಾಹುತಿಯಾಗಿದೆ.

Post a Comment

0 Comments

ಜಾಹೀರಾತು

Responsive Advertisement