ನೀರ್ಚಾಲು: ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತಪಟ್ಟಿದ್ದಾರೆ. ಕಿಳಿಂಗಾರು ಮುಂಡಾನ್ ತ್ತಡ್ಕದ ಲೋಕೇಶ್ (48) ಮೃತ ವ್ಯಕ್ತಿ. ಶ್ರೀರಾಮ್ ಫೈನಾನ್ಸ್ ಕಂಪನಿಯ ಉದ್ಯೋಗಿಯಾಗಿರುವ ಲೋಕೇಶ್ ಡಿಸ್ಕ್ ಸಂಬಂಧಿತ ಅನಾರೋಗ್ಯದಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ಬೆ ಅಧಿಕ ರಕ್ತದೊತ್ತಡದಿಂದಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು. ದಿ.ರಾಮಚಂದ್ರ ಮತ್ತು ಸುಮತಿ ದಂಪತಿಗಳ ಏಕೈಕ ಪುತ್ರರಾದ ಇವರು ಪತ್ನಿ ಸುಷ್ಮಿತಾ (ಎಸ್ಬಿಐ ಪಯಾಂಗಡಿ ಶಾಖಾ ಪ್ರಬಂಧಕಿ).ಪುತ್ರಿ ತುಷಾರ ಎಂಬಿವರನ್ನಗಲಿದ್ದಾರೆ.

0 Comments