ಸಾಂದರ್ಭಿಕ ಚಿತ್ರ
ಕಾಸರಗೋಡು: ಹಾಲು, ಮಟನ್ ಮತ್ತು ಅಡುಗೆ ಅನಿಲದ ಬೆಲೆಗಳು ಹೆಚ್ಚಳವಾಗಿರುವುದರಿಂದ ಶಾಲೆಗಳಲ್ಲಿ ಊಟ ವಿತರಣೆ ಬಿಕ್ಕಟ್ಟಿನಲ್ಲಿದೆ. ಶಾಲೆಗಳು ವಿದ್ಯಾರ್ಥಿಗಳಿಗೆ ದಿನಕ್ಕೆ ಎರಡು ಊಟ ನೀಡಲು ಪ್ರಾರಂಭಿಸಿದ್ದರೂ, ಸರ್ಕಾರ ನಿಗದಿಪಡಿಸಿದ ಮೊತ್ತದಲ್ಲಿ ಹೆಚ್ಚಳವಾಗದಿರುವುದು ಶಾಲಾ ಅಧಿಕಾರಿಗಳನ್ನು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿದೆ. ಕಳೆದ ಶೈಕ್ಷಣಿಕ ವರ್ಷದ ಆದಾಯದ ಆಧಾರದ ಮೇಲೆ ಶಾಲೆಗಳಿಗೆ ಮಧ್ಯಾಹ್ನದ ಊಟಕ್ಕೆ ಸರ್ಕಾರ ಹಣವನ್ನು ಒದಗಿಸುತ್ತಿದೆ.. ಅಂದಿನಿಂದ ಸಾಮಾಗ್ರಿಗಳ ಬೆಲೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ 150 ಮಿಲಿ ಹಾಲು ಮತ್ತು ವಾರಕ್ಕೊಮ್ಮೆ ಮೊಟ್ಟೆ ಒದಗಿಸಬೇಕು. ಈ ತಿಂಗಳಿನಿಂದ ಹಾಲಿನ ಬೆಲೆ ಲೀಟರ್ಗೆ 60 ರೂ. ಆಗಿದ್ದು, ಶಾಲಾ ಅಧಿಕಾರಿಗಳಿಗೆ ಲೀಟರ್ ಹಾಲಿಗೆ ಕೇವಲ 52 ರೂ. ನೀಡಲಾಗುತ್ತಿದೆ. ಸರ್ಕಾರವು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಶುಲ್ಕವನ್ನು 6.78 ರೂ. ಮತ್ತು ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ 10.17 ರೂ. ಎಂದು ನಿಗದಿಪಡಿಸಿತ್ತು. ಇದೀಗ ಜೂನ್ನಿಂದ ಅಡುಗೆ ಅನಿಲ ಸಿಲಿಂಡರ್ನ ಬೆಲೆ 960 ರೂ. ಆಗಿದೆ. ಆದರೆ ಕಳೆದ ಶೈಕ್ಷಣಿಕ ವರ್ಷದ ಅಂತ್ಯದ ವೇಳೆಗೆ ಅದು 930 ರೂ.ಗಳಾಗಿತ್ತು. 1,200 ವಿದ್ಯಾರ್ಥಿಗಳಿರುವ ಶಾಲೆಗೆ ತಿಂಗಳಿಗೆ ಕನಿಷ್ಠ 18 ಸಿಲಿಂಡರ್ಗಳು ಬೇಕಾಗುತ್ತವೆ. ಹಣ್ಣುಗಳು, ತರಕಾರಿಗಳು ಮತ್ತು ಅಡುಗೆ ಎಣ್ಣೆಯಿಂದ ಹಿಡಿದು ಎಲ್ಲದರ ಬೆಲೆಗಳು ಹೆಚ್ಚಾಗಿರುವುದೇ ಇದೀಗ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆ ಸಂದಿಗ್ಧಾವಸ್ಥೆಗೆ ಸಿಲುಕಲು ಪ್ರಧಾನ ಕಾರಣವಾಗುತ್ತದೆ.
ಹಿಂದೆ ಊಟಕ್ಕೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು ಅಗತ್ಯವಿರುವ ಹಣ ಲಾಕ್ಡೌನ್ ಸಮಯದಲ್ಲಿ ಸರ್ಕಾರದಿಂದ ಲಭ್ಯವಿರಲಿಲ್ಲ. ಬೇಸಿಗೆಯ ಮಧ್ಯದ ಅವಧಿಯಲ್ಲಿ ಶಾಲಾ ಅಡುಗೆ ಕೆಲಸಗಾರರಿಗೆ ನೀಡಬೇಕಿದ್ದ ಗೌರವ ವೇತನವು ಬಹಳ ಸಮಯದ ನಂತರವೂ ಬಂದಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಸಿಕ 2000 ಮತ್ತು 4000 ರೂ. ವೇತನ ನೀಡಲಾಗುತ್ತದೆ. 97 ಅಡುಗೆ ಕೆಲಸಗಾರರಿದ್ದಾರೆ. 500 ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಒಬ್ಬ ಕೆಲಸಗಾರನನ್ನು ಮತ್ತು 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಇಬ್ಬರು ಕೆಲಸಗಾರರನ್ನು ನೇಮಿಸಬೇಕಾಗಿದೆ. ಇದು ಕೂಡಾ ಶಾಲಾ ಊಟ ವಿತರಣೆಯ ಬಿಕ್ಕಟ್ಟಿಗೆ ಇನ್ನೊಂದು ಕಾರಣವಾಗಲಿದೆ ಎನ್ನಲಾಗುತ್ತಿದೆ.

0 Comments