ಕಾಸರಗೋಡು : ಕ್ಯಾಂಪ್ಕೋ. ಲಿ ಮಂಗಳೂರು ವತಿಯಿಂದ ಸಕ್ರಿಯ ಕೃಷಿಕರಿಗಾಗಿ ಹಮ್ಮಿಕೊಂಡಿರುವ 'ಸಾಂತ್ವನ' ಯೋಜನೆಯನ್ವಯ ಬಾಯಾರು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯರಾದ ರಾಜಾರಾಮ್ ಬಲ್ಲಾಳ್ ಚಿಪ್ಪಾರು, ಇವರ ಹೖದಯದ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಧನಸಹಾಯವಾಗಿ ರೂ 50,000/- ಮೊತ್ತವನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಸದಾನಂದ ಶೆಟ್ಟಿ ಕೊಮ್ಮಂಡರವರು ಬಾಯಾರು ಕ್ಯಾಂಪ್ಕೋ ಶಾಖೆಯಲ್ಲಿ ವಿತರಿಸಿದರು. ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಸೌಮ್ಯಾ ಪ್ರಕಾಶ್ ಮೀಯಪದವು, ಕ್ಯಾಂಪ್ಕೋ ಬದಿಯಡ್ಕ ವಲಯದ ಪ್ರಬಂಧಕರಾದ ಚಂದ್ರ ಯಂ, ಕ್ಯಾಂಪ್ಕೋ ಬಾಯಾರು ಶಾಖೆಯ ಪ್ರಬಂಧಕರಾದ ರಮೇಶ್ ವೈ, ಸಿಬ್ಬಂದಿಗಳಾದ ಪ್ರವೀಣ್ ರಾಜ್ ಬಲ್ಲಾಳ್. ಕುಮಾರ್, ಸಜನ್, ವಿಕಾಸ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

0 Comments