ಮಾನ್ಯ : ಕಾರ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಶ್ರೀ ಗಣಪತಿ ದೇವರ ವಿಗ್ರಹ ತಯಾರಿಯ ಸುಮೂರ್ತ ಕಾರ್ಯಕ್ರಮವು ಇಂದು ಬೆಳಿಗ್ಗೆ ವಿಗ್ರಹ ತಯಾರಕರಾದ ಬ್ರಹ್ಮಶ್ರೀ ಪುರೋಹಿತ ರತ್ನ ಕೇಶವ ಆಚಾರ್ಯ ಅವರ ಸ್ವಗೃಹ 'ಗುರುಕೃಪಾ', ಉಳ್ಳಿಯತ್ತಡ್ಕದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಭಟ್ ಪುದುಕೋಳಿ, ಆಡಳಿತ ಮಂಡಳಿ ಸದಸ್ಯರಾದ ಸುಂದರ ಶೆಟ್ಟಿ ಕೊಲ್ಲಂಗಾನ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ಭಟ್ ವಳಕುಂಜ, ಕೋಶಾಧಿಕಾರಿ ರಾಮ ಕೆ. ಮಾನ್ಯ, ಯುವಕವೃಂದದ ಅಧ್ಯಕ್ಷರಾದ ಪುರುಷೋತ್ತಮ ಕಾರ್ಮಾರು ಹಾಗೂ ಗೋಕುಲ್ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

0 Comments