ಕುಂಬಳೆ : ಪೈವಳಿಕೆಯ ಬಿಎಸ್ಎನ್ಎಲ್ ಟವರ್ನ ಬಿಟಿಎಸ್ ಕೋಣೆಯ ಬೀಗ ಮುರಿದು ಬೆಲೆ ಬಾಳುವ ತಾಮ್ರದ ತಂತಿಗಳು ಮತ್ತು ತಾಮ್ರದ ಸರಳುಗಳನ್ನು ಕಳವು ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ ತಾಮ್ರದ ತಂತಿಗಳು ಮತ್ತು ಸರಳುಗಳನ್ನು ಕಳವು ಮಾಡಿದ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಎಸ್ಎನ್ಎಲ್ ಕಾಸರಗೋಡು ಉಪವಿಭಾಗೀಯ ಎಂಜಿನಿಯರ್ ಶ್ರೀಜಿತ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ ಸಿಐ ಜಿಜೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

0 Comments