ಬದಿಯಡ್ಕ : ರಾಷ್ಟ್ರ ಸ್ವಾಭಿಮಾನ ಸಮಿತಿ ಬದಿಯಡ್ಕ ಮಂಡಲ ಸಮಿತಿಯ ಆಶ್ರಯದಲ್ಲಿ ತಿರಂಗ ಯಾತ್ರೆ ನಾಳೆ (ಗುರುವಾರ) ಸಾಯಂಕಾಲ ಬದಿಯಡ್ಕ ಪೇಟೆಯಲ್ಲಿ ಜರಗಲಿರುವುದು. ನಾಳೆ ಸಾಯಂಕಾಲ 4 ಗಂಟೆಗೆ ಬೋಳುಕಟ್ಟೆ ಮೈದಾನ ಬಳಿಯಿಂದ ತಿರಂಗ ಯಾತ್ರೆ ಹೊರಡಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅವರು ಉದ್ಘಾಟಿಸುವರು. ಜನ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸುವರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ. ತಿಳಿಸಿದ್ದಾರೆ.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments