Ticker

6/recent/ticker-posts

ಅಡೂರಿನ ಬಿಜೆಪಿ‌ ಮುಖಂಡ, ಧಾರ್ಮಿಕ ಮುಂದಾಳು ಪ್ರದೀಪ್ ಕುಮಾರ್ ಹೃದಯಾಘಾತದಿಂದ ನಿಧನ


 ಅಡೂರು: ಸಕ್ರಿಯ ಬಿಜೆಪಿ ಮುಖಂಡ ಅಡೂರು ಬಲ್ಲಕಾನ‌ ನಿವಾಸಿ ಪ್ರದೀಪ್‌ಕುಮಾರ್(42) ಹೃದಯಾಘಾತದಿಂದ ನಿಧನರಾದರು. ನಿನ್ನೆ (ಆದಿತ್ಯವಾರ) ಮದ್ಯಾಹ್ನ  ಮನೆಯಲ್ಲಿ ಇದ್ದ ವೇಳೆ  ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಿದ್ದತೆ ನಡೆಸುತ್ತಿದ್ದಂತೆಯೇ ಮೃತಪಟ್ಟರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮಿಳಾ ಸಿ.ನಾಯಕ್ ಅವರ ತಮ್ಮನಾಗಿದ್ದಾರೆ. ಕೃಷಿಕರೂ ಆಗಿರುವ ಅವರು  ಬಿಜೆಪಿ ದೇಲಂಪಾಡಿ ಪಂಚಾಯತು ಅಧ್ಯಕ್ಷರಾಗಿದ್ದು ಅನಂತರ  ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯರಾಗಿದ್ದರು.

 ಮೃತರು ತಂದೆ ಜಯನಾರಾಯಣ ನಾಯಕ್, ತಾಯಿ ಭಾಗೀರಥಿ, ಸಹೋದರ ಸಹೋದರಿಯರಾದ ಪೂರ್ಣಿಮಾ, ಪ್ರಮಿಳಾ ಸಿ.ನಾಯಕ್, ಪ್ರಮೋದ್ ಕುಮಾರ್, ಪ್ರತಿಭ, ಬಾವಂದಿರಾದ ಪ್ರಶಾಂತ್ ಕುಮಾರ್, ರಮೇಶ್, ಚಂದ್ರಶೇಖರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Post a Comment

0 Comments