Ticker

6/recent/ticker-posts

ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ, ಕಾಸರಗೋಡು ಸಹಿತ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ.


 ತಿರುವನಂತಪುರಂ: ರಾಜ್ಯದಲ್ಲಿ. ಮುಂದಿನ‌ ಮೂರು ಗಂಟೆಗಳಲ್ಲಿ ಭಾರೀ ಮಳೆ ಬರಲಿದೆಯೆಂದು ಹವಾಮಾನ ‌ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು,  ಕಣ್ಣೂರು, ಎರ್ನಾಕುಲಂ, ಇಡುಕ್ಕಿ, ಕೊಟ್ಟಯಂ, ತಿರುವನಂತಪುರಂ ಎಂಬೀ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ‌ಪತ್ತನಂತಿಟ್ಟ, ಪಾಲಕ್ಕಾಡ್, ಮಲಪ್ಪುರಂ, ಕೋಜಿಕ್ಕೋಡ್, ವಯನಾಡ್ ಎಂಬೀ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ‌ಕೊಲ್ಲಂ, ಆಲಪ್ಪುಯ, ತ್ರಿಶೂರ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಸಿಡಿಲು, ಮಿಂಚು, ಬಿರುಗಾಳಿ ಬೀಸಲಿದ್ದು ಎಚ್ಚರ ವಹಿಸುವಂತೆ ವಿನಂತಿಸಲಾಗಿದೆ. ಮುಂದಿನ ಐದಾರು ದಿನಗಳಲ್ಲಿ ರಾಜ್ಯದಲ್ಲಿ ಬೇಸಿಗೆ ಮಳೆ ಬರಲಿದೆಯೆಂದು ವರದಿ ತಿಳಿಸಿದೆ.

Post a Comment

0 Comments