Ticker

6/recent/ticker-posts

ರಸ್ತೆ ಶೋಚನೀಯ ಸ್ಥಿತಿ ಪರಿಹರಿಸಲು ಒತ್ತಾಯಿಸಿ ಕಾಂಗ್ರೆಸ್ ಮಂಡಲಾಧ್ಯಕ್ಷರಿಂದ ಲೋಕೋಪಯೋಗಿ ಅಧಿಕಾರಿಗಳಿಗೆ ಮನವಿ


 ಬದಿಯಡ್ಕ: ರಸ್ತೆಗಳ ಶೋಚನೀಯ ಸ್ಥಿತಿ ಪರಿಹರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷ ಶ್ಯಾಮ‌ಪ್ರಸಾದ್ ಮಾನ್ಯ ಅವರು ಲೋಕೋಪಯೋಗಿ ಇಲಾಖೆಯ ಬದಿಯಡ್ಕ ಸಹಾಯಕ ಇಂಜಿನಿಯರಿಗೆ ಮನವಿ ಸಲ್ಲಿಸಿದರು. ಬದಿಯಡ್ಕ- ಬರ್ಲ- ವಿದ್ಯಾಗಿರಿ- ಮುನಿಯೂರು ಲೋಕೋಪಯೋಗಿ ದಸ್ತೆಯ ಬರ್ಲದಲ್ಲಿ ಜಲನಿಗಮ ಹಾಗೂ ಖಾಸಗಿ ಟಿಲಿಕಾಂ ಕಂಪನಿ ಸೇರಿ ಹೊಂಡ ತೆಗೆದು ಮುಚ್ಚದೆ  ಬಿಟ್ಟು ಹೋಗಿದ್ದು ಮಳೆ ಬಂದಾಗ ಮಣ್ಣು ಹರಿದು ರಸ್ತೆ ಕೆಸರುಗುಂಡಿಯಾಗಿದೆ. ಇಲ್ಲಕ ಅಗತ್ಯದ ಚರಂಡಿ ನಿರ್ಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

Post a Comment

0 Comments