Ticker

6/recent/ticker-posts

Ad Code

ಮದುವೆ ವೇಳೆ ನಡೆದ ಗಲಾಟೆಯನ್ನು ಮಾತುಕತೆ‌ ಮೂಲಕ‌ ಮುಗಿಸಲು ಬಂದಾಗ ಚಾಕು ಇರಿತ, ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ


 ಮಂಗಳೂರು: ಮದುವೆ ವೇಳೆ ನಡೆದ ಗಲಾಟೆಯ ವಿಚಾರವಾಗಿ ಸಂಧಾನಕ್ಕೆ ಬಂದಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ಎಂಬಲ್ಲಿ ನಡೆದಿದೆ.

 ವಾಮಂಜೂರು ನಿವಾಸಿ ಸುಲೈಮಾನ್ (50) ಕೊಲೆಗೀಡಾದ ವ್ಯಕ್ತಿ.  ಇವರ ಇಬ್ಬರು ಮಕ್ಕಳಾದ ರಿಯಾಬ್ ಹಾಗೂ ಸಿಯಾದ್ ಎಂಬಿವರಿಗೂ ಗಂಭೀರ ಗಾಯಗಳಾಗಿವೆ. ಹತ್ಯೆಗೈದ  ಆರೋಪಿ ಮುಸ್ತಫಾ(30) ಇದೀಗ ತಲೆಮರೆಸಿಕೊಂಡಿದ್ದಾನೆ. 

ಕೊಲೆಯಾದ ಸುಲೈಮಾನ್ ಅವರು ಸಂಬಂಧಿ ಆರೋಪಿ ಮುಸ್ತಫಾನ ಮದುವೆ ನೆರವೇರಿಸಿದ್ದರು. ಮದುವೆ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಚಾರವಾಗಿ ಮಾತುಕತೆ ನಡೆಸಲು ಸುಲೈಮಾನ್, ತನ್ನ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಜೊತೆಗೆ ಮುಸ್ತಫಾರ ಮನೆಗೆ  ಬಂದಿದ್ದರು. ಈ ವೇಳೆ ಮುಸ್ತಫಾ ಚಾಕುವಿನಿಂದ ಸುಲೈಮಾನ್ ರನ್ನು  ಇರಿದಿದ್ದಾನೆ. ಅಲ್ಲದೇ ಇಬ್ಬರು ಮಕ್ಕಳ ಮೇಲೂ ದಾಳಿ ಮಾಡಿ ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಸುಲೈಮಾನ್, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಗೊಂಡ ರಿಯಾಬ್ ಮತ್ತು ಸಿಯಾಬ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Post a Comment

0 Comments