ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕರಂದಕ್ಕಾಡಿನಲ್ಲಿ ಭಾರತಾಂಭೆಯ ಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು. ಪಕ್ಷದ ಜಿಲ್ಲಾ ಅಧ್ಯಕ್ಷೆ ಅಶ್ವಿನಿ.ಎಂ.ಎಲ್. ಪುಷ್ಪಾರ್ಚನೆ ಉದ್ಘಾಟಿಸಿದರು. ಅವರು ಮಾತನಾಡಿ ಭಾರತಾಂಬೆಯನ್ನು ವಿರೋಧಿಸಿವವರು ವಿದೇಶಿ ತತ್ವಶಾಸ್ತ್ರದ ಬೆಂಬಲಿಗರಾಗಿದ್ದಾರೆ, ಪಿಣರಾಯಿ ಸರಕಾರವು ಅಬಿವೃದ್ದಿ ವಿಷಯದಲ್ಲಿ ಏನೂ ಹೇಳಲು ಇಲ್ಲ.ಅದಕ್ಕಾಗಿ ಭಾರತ ಮಾತೆಯ ವಿರುದ್ದ ದ್ವನಿ ಎತ್ತುತ್ತಿದ್ದಾರೆ ಎಂದರು.
.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್,ಕೋಶಾಧಿಕಾರಿ ವೀಣ ಅರುಣ್ ಶೆಟ್ಟಿ, ಕಾರ್ಯದರ್ಶಿಗಳಾದ ಅಶ್ವಿನಿ.ಕೆ.ಎಂ, ಸಂಜೀವ ಪುಳಿಕೂರು, ಸವಿತ ಟಿಉಚರ್,ಗುರುಪ್ರಸಾದ್ ಪ್ರಭು, ಶ್ರೀಧರ ಕೂಡ್ಕು, ಚಂದ್ರಶೇಖರ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದರು.
0 Comments