ತ್ರಿಶೂರ್: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಚಿರತೆ ಹಿಡಿದುಕೊಂಡು ಹೋದ ನಾಲ್ಕು ವರ್ಷದ ರಜನಿಯ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ, ಅಗ್ನಿಶಾನಕ ದಳ ಪೊಲೀಸರು, ಊರವರು ಸೇರಿ ನಡೆಸಿದ ಹುಡುಕಾಟದಲ್ಲಿ ಚಾತೋಟದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಅರ್ದ ಚಿರತೆ ತಿಂದ ರೀತಿಯಲ್ಲಿತ್ತು.
ತಮಿಳುನಾಡಿನ ವಾಲ್ ಪಾರ ಎಂಬಲ್ಲಿ ನಡೆದಿದೆ. ಜಾರ್ಖಂಡ್ ನಿವಾಸಿಗಳಾದ ಮನೋಜ್- ಮೋನಿಕ ದಂಪತಿಯ ಪುತ್ರಿ ರಜನಿ (4) ಯನ್ನು ನಿನ್ನೆ (ಶುಕ್ರವಾರ)ಸಂಜೆ ಚಿರತೆ ಕೊಂಡು ಹೋಗಿತ್ತು.
ನಿನ್ನೆ ಸಾಯಂಕಾಲ 6 ಘಂಟೆಯ ವೇಳೆ ಈ ಘಟನೆ ನಡೆದಿದೆ. ಮಗುವಿನ ಪತ್ತೆ ಗಾಗಿ ಅರಣ್ಯ ಇಲಾಖೆ,ಅಗ್ನಿಶಾಮಕ ದಳ, ಪೊಲೀಸರು, ನಾಗರಿಕರು ಸೇರಿ ವ್ಯಾಪಕ ಹುಡುಕಾಟ ಆರಂಭಿಸಿದ್ದರು. ಇಂದು ಬೆಳಗ್ಗೆ ನಡೆಸಿದ ಹುಡುಕಾಟದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ
0 Comments