ಕುಂಬಳೆ: ಖುಲಾಸೆಗೊಂಡ ಪ್ರಕರಣದ ಆರೋಪಿಯಾಗಿದ್ದ ಯುವಕನ ವಿರುದ್ಧ ಬೆದರಿಕೆ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಇಬ್ಬರ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಡನಾಡು ಕಟ್ಟತ್ತಡ್ಕ ನಿವಾಸಿ ವಿ.ಎಂ. ಅರುಣ್ ಕುಮಾರ್ ನೀಡಿದ ದೂರಿನಂರೆ ಹಕ್ಕೀಂ, ಇಂತಿಯಾಸ್ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ. ಇಂತಿಯಾಸ್ ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಅರುಣ್ ಕುಮಾರ್ ಅವರು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಈ ಬಗ್ಗೆ *ಪೊಲಿಟಿಕ್ಸ್ ಓನ್ಲಿ* ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಅರುಣ್ ಕುಮಾರ್ ವಿರುದ್ದ ಬೆದರಿಕೆ ಸಂದೇಶ ಬಂದಿತ್ತು. 'ಸಮಯ, ಸಂದರ್ಭ' ಸಿಕ್ಕಿದಾಗ ಆ ಫೈಲು ತೆರೆಯಲಾಗುವುದು' ಎಂದು ಸಹ ಹೇಳಲಾಗಿತ್ತು. ಅಲ್ಲದೆ ಅರುಣ್ ಕಮಾರ್ ಅವರ ಮನೆಯ ದಾರಿಯನ್ನು ಸಹ ಗ್ರೂಪಿನಲ್ಲಿ ನೀಡಲಾಗಿತ್ತು. ಈ ಬಗ್ಗೆ ಅರುಣ್ ಕುಮಾರ್ ಅವರ ದೂರಿನಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ
0 Comments