Ticker

6/recent/ticker-posts

ಜುಗಾರಿ ಅಡ್ಡೆಗೆ ಪೊಲೀಸರ ದಾಳಿ, ನಾಲ್ಕು ಮಂದಿಯ ಸೆರೆ, 12200 ರುಇ.ವಶ,


 ಬದಿಯಡ್ಕ:  ಉಕ್ಕಿನಡ್ಕ ಬಳಿಯ ಬಣ್ಪತ್ತಡ್ಕದಲ್ಲಿ  ಕತ್ತಲೆಯ ಮರೆಯಲ್ಲಿ  ಜುಗಾರಿ (ಪುಳ್ಳಿ ಮುರಿ) ಆಟದಲ್ಲಿ ನಿರತರಾಗಿದ್ದ ನಾಲ್ಕು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ್ದ 12200 ರೂ.ವಶಪಡಿಸಲಾಗಿದೆ. ಇಬ್ಬರು ಓಡಿ ಪರಾರಿಯಾಗಿದ್ದಾರೆ.  ಪಡ್ರೆ ಶಿವಂತಡ್ಕ ನಿವಾಸಿ ಪ್ರೇಮಾನಂದ ಭಟ್(25), ಪಡ್ರೆ ಅಯ್ಯಪ್ಪ ಮೂಲೆಯ ಪ್ರಶಾಂತ್ ಕುಮಾರ್ ಯಾನೆ ಪಚ್ಚು(30),  ಬಜಕೂಡ್ಲು ನಿವಾಸಿ ಸಚಿನ್(30), ಬಂಟ್ವಾಳ ಸಜಿಪದವು ಕೋಟಕಣಿ ನಿವಾಸಿ ರಿಯಾಸ್(40) ಬಂಧಿತ ಆರೋಪಿಗಳು. ಇಂದು (ಶನಿವಾರ) ಮುಂಜಾನೆ 2 ಗಂಟೆಯ ವೇಳೆ ಬದಿಯಡ್ಕ ಎಸ್.ಐ.ಸುಮೇಶ್ ಬಾಬು ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ ಆರೋಪಿಗಳ ಬಂಧನ ನಡೆದಿದೆ. ಉಕ್ಕಿನಡ್ಕ ಬಳಿಯ ಬಣ್ಪುತ್ತಡ್ಕ ವಿದ್ಯುತ್ ಟ್ರಾನ್ಸಫರ್ಮರ್  ಬಳಿ ಬೀದಿ ದೀಪದಡಿಯಲ್ಲಿ  ಪ್ಲಾಸ್ಟಿಕ್ ಶೀಟ್ ಕಟ್ಟಿ ಜುಗಾರಿ ನಡೆದಿತ್ತು. ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರ ದಾಳಿ ನಡೆದಿತ್ತು.

Post a Comment

0 Comments