Ticker

6/recent/ticker-posts

Ad Code

ಕಣ್ಣೂರಿನಲ್ಲಿ ಸಿಡಿಲು ಬಡಿದು ಇಬ್ಬರು ಕಾರ್ಮಿಕರು ಮೃತ್ಯು


 ಕಣ್ಣೂರು: ಸಿಡಿಲು ಬಡಿದು ಕೆಂಪು‌ಕಲ್ಲು ಕೋರೆಯ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ಅಸ್ಸಾಂ ನಿವಾಸಿ ಜೋಸ್ ನೆಸ್ರಿ, ಒರಿಸ್ಸಾ ನಿವಾಸಿ ರಾಜೇಶ್ ಮೃತಪಟ್ಟವರು. ಇಂದು (ಮಂಗಳವಾರ) ಮದ್ಯಾಹ್ನ 2.30 ರ ವೇಳೆ  ಕಣ್ಣೂರು ಶ್ರೀಕಂಠಾಪುರಂ ನಿಡಿಯೋಲ್ ಕಾಕಣ್ಣಪಾರದಲ್ಲಿ ಈ ಘಟನೆ ನಡೆದಿದೆ. ಸಿಡಿಲು ಬಡಿದ ಕೂಡಲೇ ಸ್ಥಳೀಯರು ಆಗಮಿಸಿ ಗಾಯಗೊಂಡವರನ್ನು  ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ದರು. ದಾರಿ ಮಧೈ ಇಬ್ಬರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಓರ್ವರ ಸ್ಥಿತಿ ಚಿಂತಾಜನಕವಾಗಿದೆ.
ಮಲಪ್ಪುರಂ ಕೊಂಡೋಟ್ಟಿಯಲ್ಲಿ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ.

Post a Comment

0 Comments