Ticker

6/recent/ticker-posts

Ad Code

ಮಂಜೇಶ್ವರ ಕಡಂಬಾರಿನಲ್ಲಿ ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆ


 ಮಂಜೇಶ್ವರ: ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬಾರು ನಿವಾಸಿಗಳಾದ  ಅಜಿತ್(35), ಪತ್ನಿ ಶ್ವೇತ(27) ಆತ್ಮಹತ್ಯೆಗೈದ ದಂಪತಿ. ಅಜಿತ್ ಅವರು ಕಡಂಬಾರು ಮನೆಯಲ್ಲೂ ಶ್ವೇತ ಮಂಗಳೂರು ಆಸ್ಪತ್ರೆಯಲ್ಲಿಯೂ ಮೃತಪಟ್ಟಿದ್ದಾರೆ. ಮೃತ ಅಜಿತ್ ಪೈಂಟಿಂಗ್ ಕಾರ್ಮಿಕರಾಗಿದ್ದು ಪತ್ನಿ ಶ್ವೇತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ನಿನ್ನೆ ಅಜತ್ ಹಾಗೂ ಶ್ವೇತ ಮನೆಗೆ ಬೇಗನೆ ಬಂದಿದ್ದು ಅನಂತರ ಮಗನನ್ನು ಬಂದ್ಯೋಡಿನ ಸಹೋದರಿಯ ಮನೆಯಲ್ಲಿ ಬಿಟ್ಟು ಬಂದಿದ್ದರು. ನಮಗೆ ತುರ್ತು ಬೇರೆ ಕಡೆಗೆ ಹೋಗಲಿಕ್ಕಿದೆ, ಮಗುವನ್ನು ನೋಡಿಕೊಳ್ಳಿ ಎಂದು ಹೇಳಿ ಬಂದಿದ್ದರು. ಇವರು ಆತ್ಮಹತ್ಯೆ ಮಾಡಲು ಕಾರಣವೇನು ಎಂದು ತಿಳಿದು ಬಂದಿಲ್ಲ.

Post a Comment

0 Comments