ಕಾಸರಗೋಡು : ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ಮೈಂಡ್ ವೇರ್ ಕ್ಲಿನಿಕ್ ನ ಜಂಟಿ ಆಶ್ರಯದಲ್ಲಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋದಿ ದಿನವನ್ನು ಆಚರಿಸಲಾಯಿತು.
ಯುವ ಜನತೆ ಹಾಗೂ ಭವಿಷ್ಯದ ಸಮಾಜವನ್ನು ಕೇಂದ್ರೀಕರಿಸಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾಲಿಕ್ ದಿನಾರ್ ನರ್ಸಿಂಗ್ ಕಾಲೇಜಿನ ಬಿಎಸ್ಸಿಸಿ ವಿದ್ಯಾರ್ಥಿಗಳು ಜನ ಜಾಗೃತಿ ಸಂದೇಶದ ಅಣಕು ಪ್ರದರ್ಶನ ನಡೆಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಐಎಂಎ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ ಉದ್ಘಾಟಿದರು. ಬಳಿಕ ಮಾತನಾಡುತ್ತಾ ಸ್ವಾಸ್ಥ ಸಮಾಜ ಸಂಕಲ್ಪ ನಮ್ಮೆಲ್ಲರ ಧ್ಯೇಯವಾದರೆ ಮಾತ್ರ ಭವಿಷ್ಯದ ಜನಾಂಗ ಅಮಲು ಪದಾರ್ಥಗಳ ದಾಸರಾಗದೆ ಆರೋಗ್ಯಯುತರಾಗಿ ಬದುಕಲು ಸಾಧ್ಯ. ನಾಳಿನ ಒಳಿತಿಗಾಗಿ ನಾವು ಇಂದೇ ಒಳ್ಳೆಯವರಾಗಬೇಕು ಎಂದರು.
ಡಾ.ಪಿಎಂಎ ನಿಶಾದ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು.ಐಎಂಎ ಯ ಉಪಾಧ್ಯಕ್ಷ ಡಾ ಕಾಸಿಂ,ಕೆ.ಎಸ್.ಅಬ್ದುಲ್ಲ ಹಾಸ್ಪಿಟಲ್ ನ ಪ್ರಬಂಧಕ ಆನ್ವರ್ ಸಾದತ್, ಡಾ.ಜ್ಯೋತ್ಸಾ, ಎಣ್ಮಕಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಆಯಿಷಾ ಪೆರ್ಲ, ಎ.ಎ.ಮುಹಮ್ಮದ್ ನುಹಾನ್ ಮೊದಲಾದವರು ಮಾತನಾಡಿದರು. ಅಭಿಜಿತ್ ಪಿ ಸ್ವಾಗತಿಸಿ ಹೀನಾ ವಂದಿಸಿದರು.
0 Comments