Ticker

6/recent/ticker-posts

ಪೆರಡಾಲದಲ್ಲಿ ಕಾಮಗಾರಿ ಪೂರ್ತಿಯಾಗುವ ಮೊಧಲೇ ಕಾಂಕ್ರೀಟ್ ಕೆಳಗೆ ಬಿದ್ದ ಪ್ರಕರಣ, ಬಿಜೆಪಿ ನಿಯೋಗ ಬೇಟಿ


 ಬದಿಯಡ್ಕ: ಬದಿಯಡ್ಕ ಪಂಚಾಯತ್ ನ 14 ನೇ ವಾರ್ಡ್ ಪಟ್ಟಾಜೆ ಕೊರಗ ಕಾಲನಿಯಲ್ಲಿ ಲೈಫ್ ಭವನ ಪದ್ಧತಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಯ ಕಾಮಗಾರಿ ಪೂರ್ಣಗೊಳ್ಳುವ  ಮೊದಲೇ ಮನೆ ಕುಸಿದು ಬಿದ್ದ  ಪ್ರದೇಶಕ್ಕೆ ಬಿಜೆಪಿ ಜನಪ್ರತಿನಿಧಿಗಳ, ಮುಂದಾಳುಗಳ ನಿಯೋಗ ಬೇಟ ನೀಡಿತು. 

ಮನೆಯ ಗುತ್ತಿಗೆ ಪಡೆದ ಗುತ್ತಿಗೆದಾರ ಕಳಪೆ ರೀತಿಯಲ್ಲಿ ಕಾಮಗಾರಿ ನಡೆಸಿದ್ದು ಇದತಿಂದಾಗು ಅಮಾಯಕರು  ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಬ್ಲಾಕ್ ಪಂಚಾಯತ್ ಸದಸ್ಯೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆ ಎಂ ಆರೋಪಿಸಿದರು.  ಹಲವು ವರ್ಷಗಳಿಂದ ಪರಿಶಿಷ್ಟ ರ್ಗದವರ ಅಭಿವೃದ್ದಿಗಾಗಿ  ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದರೂ ಎಲ್ಲವೂ ಮದ್ಯವರ್ತಿಗಳ ಪಾಲಾಗುತ್ತದೆ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯ ಎಂದವರು ಒತ್ತಾಯಿಸಿದರು.

ಬಿಜೆಪಿ ಬದಿಯಡ್ಕ ಪಶ್ಚಿಮ ವಲಯ ಕಾರ್ಯದರ್ಶಿಗಳಾದ ಆನಂದ ಪೆರಡಾಲ, ಶರತ್ ಬದಿಯಡ್ಕ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿದರು.  

ಈ ಬಗ್ಗೆ "ವಿಶೇಷ ಚಾನಲ್" ನಿನ್ನೆ ಸಮಗ್ರ ವರದಿ ಪ್ರಕಟಿಸಿತ್ತು.

Post a Comment

0 Comments