ಕುಂಬಳೆ: ಬಿದ್ದು ಸಿಕ್ಕಿದ ಹಣವಿರುವ ಪರ್ಸ್ ಅದರ ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಖಾಸಗಿ ಬಸ್ಸು ಸಿಬಂದಿಗಳು ಮಾದರಿಯಾಗಿದ್ದಾರೆ. ಕುಂಬಳೆ- ಧರ್ಮತ್ತಡ್ಕ ರೂಟಿನಲ್ಲಿ ಸಾಗುವ ಮಹಾಲಕ್ಷ್ಮಿ ಬಸ್ಸಿನ ಚಾಲಕ ಅಂಗಡಿಮೊಗರು ನಿವಾಸಿ ಅಶ್ರಫ್, ಕಂಡೆಕ್ಟರ್ ಕುಡಾಲುಗುತ್ತು ನಿವಾಸಿ ಸತೀಶ್ ರೈ ಎಂಬಿವರು ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾದವರು.
ನಿನ್ನೆ ( ಗುರುವಾರ) ನಾಯ್ಕಾಪಿನಲ್ಲಿ ಇಳಿದ ತಮಿಳುನಾಡು ಮೂಲದ ಮಹಿಳೆಯ 12 ಸಾವಿರ ರೂ. ಒಳಗೊಂಡ ಪರ್ಸ್ ಬಸ್ಸಿನಲ್ಲಿ ಬಿದ್ದು ಹೋಗಿತ್ತು. ಬಸ್ಸು ಧರ್ಮತ್ತಡ್ಕ ತಲುಪಿದಾಗ ಹಣವಿರುವ ಪರ್ಸ್ ಚಾಲಕ ಹಾಗೂ ಕಂಡೆಕ್ಟರರ ಗಮನಕ್ಕೆ ಬಂತು. ಕೂಡಲೇ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚರಿಸಲಾಯಿತು. ಮನೆಗೆ ತಲುಪಿದ ಮಹಿಳೆಗೆ ತನ್ನ ಹಣವಿರುವ ಪರ್ಸ್ ಕಳೆದು ಹೋದ ಬಗ್ಗೆ ಗಮನಕ್ಕೆ ಬಂತು. ಮಹಿಳೆ ಇಂದು ಬೆಳಗ್ಗೆ ಕುಂಬಳೆಗೆ ಬಂದು ಅಲ್ಲಿನ ವ್ಯಾಪಾರಿಗಳಲ್ಲಿ ಈ ಮಾಹಿತಿ ತಿಳಿಸಿದರು. ವ್ಯಾಪಾರಿಗಳು ಕೂಡಲೇ ಬಸ್ಸು ಸಿಬಂದಿಗಳ ಜತೆ ಸಂಪರ್ಕಿಸಿದರು. ಬಸ್ಸು ಇಂದು ಬೆಳಗ್ಗೆ ಕುಂಬಳೆಗೆ ಯಲುಪಿದಾಗ ಮಹಿಳೆಗೆ ಹಣವಿರುವ ಪರ್ಸ್ ಹಸ್ತಾಂತರಿಸಲಾಯಿತು. ಬಸ್ಸು ಚಾಲಕ ಹಾಗೂ ಕಂಡೆಕ್ಟರರ ಮಾದರಿ ಚಟುವಟಿಕೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ
0 Comments