Ticker

6/recent/ticker-posts

ಹಿರಿಯ ಸ್ವಯಂಸೇವಕ, ಅರ್ಚಕ ಕೃಷ್ಣ ಭಟ್ ಪೂಂಗಾಲಕಯ ನಿಧನ



ಬೋವಿಕ್ಕಾನ: ಕಾನತ್ತೂರು ನಿವಾಸಿ ಕೃಷಿಕ ಪೂಂಗಾಲಕಯ ಕೃಷ್ಣ ಭಟ್ (೭೩) ಶುಕ್ರವಾರ ರಾತ್ರಿ ನಿಧನರಾದರು. ಪಯ ಮಹಾವಿಷ್ಣು ದೇವಸ್ಥಾನದಲ್ಲಿ ಅನೇಕ ವರ್ಷಗಳ ಕಾಲ ಅರ್ಚಕರಾಗಿದ್ದರು. ಕೆಲವು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ಪುತ್ರನೊಂದಿಗೆ ವಾಸಿಸುತ್ತಿದ್ದರು. ಅಸೌಖ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ತಪಾಸಣೆಗೆಂದು ತೆರಳಿದ್ದ ಸಂದರ್ಭ ನಿಧನರಾದರು. ಪೂಂಗಾಲಕಯ ಮನೆಯಲ್ಲಿ ಶನಿವಾರ ಬೆಳಗ್ಗೆ ಅಂತಿಮಸಂಸ್ಕಾರ ನಡೆಸಲಾಯಿತು. ಪತ್ನಿ ಈಶ್ವರಿ, ಮಕ್ಕಳಾದ ಪೂರ್ಣಿಮಾ, ಆಶಾ, ಅರುಣಾ, ಈಶ್ವರ ಪ್ರಶಾಂತ, ಅಳಿಯಂದಿರು ಸದಾಶಿವ ಬೆಳ್ಳಾರೆ, ಶಶಿಧರ ಕೂರ್ಲುಗಯ, ಮುಕುಂದರಾಜ ಸರಳಿ, ಸೊಸೆ ರಶ್ಮಿ, ಸಹೋದರರಾದ ವೆಂಕಟ್ರಮಣ ಭಟ್ ಬೆಂಗಳೂರು, ವಕೀಲ ಪಿ. ಈಶ್ವರ ಭಟ್ ಕಾಸರಗೋಡು, ನಾರಾಯಣ ಭಟ್ ಪೂಂಗಾಲಕಯ, ಸಹೋದರಿಯರಾದ ಅದಿತಿ, ವೆಂಕಟೇಶ್ವರಿ, ಸಾವಿತ್ರಿ, ತಿರುಮಲೇಶ್ವರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಆರೆಸ್ಸೆಸ್ ಹಾಗೂ ಬಿಜೆಪಿಯಲ್ಲಿ ಅವರು ಸಕ್ರಿಯರಾಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ತೊಡಗಿಸಿಕೊಂಡಿದ್ದರು.

Post a Comment

0 Comments