Ticker

6/recent/ticker-posts

Ad Code

ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಹಿತ ಮೂವರು ಮೃತ್ಯು

 


ಕಲಬುರಗಿ: ಜೇವರ್ಗಿ ತಾಲೂಕಿನ ಗೌನಳ್ಳಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ  ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್​​​​​​​​ ಬೀಳಗಿ (51) ಅವರು  ಮೃತಪಟ್ಟಿದ್ದಾರೆ.ವಿಜಯಪುರ ಜಿಲ್ಲೆಯಿಂದ ಕಲಬುರಗಿಯತ್ತ ಕಾರಿನಲ್ಲಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಹಾಂತೇಶ್ ಸೇರಿದಂತೆ ಕಾರಿನಲ್ಲಿದ್ದ ಅವರ ಸಹೋದರ ಶಂಕರ್ ಬೀಳಗಿ, ಚಾಲಕನು ಸಹ ಸ್ಥಳದಲ್ಲಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್​​​ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಮೊದಲು ದಾವಣಗೆರೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆಯನ್ನು ಪಡೆದಿದ್ದ ಅವರು, ಪ್ರಸ್ತುತ ಬೆಸ್ಕಾಂನ ಎಂಡಿಯಾಗಿದ್ದರು. ಚಾಲಕನ ನಿಯಂತ್ರಣ ತಪ್ಪಿ ಇನ್ನೊವಾ ಕಾರು ಪಲ್ಟಿಯಾದ ಪರಿಣಾಮ ಈ ಘೋರ ಅನಾಹುತ ಸಂಭವಿಸಿದೆ. ಮಣ್ಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬೀಳಗಿ ಅವರು ಅಸುನೀಗಿದ್ದಾರೆ.

ಇನ್ನು ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್​​ ಕಮಿಷನರ್ ಡಾ.ಶರಣಪ್ಪ ಎಸ್​​ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಸೇರಿ ಇತರ ಅಧಿಕಾರಿಗಳು ದೌಡಾಯಿಸಿದ್ದಾರೆ.

2012ರ ಕರ್ನಾಟಕ ಕೇಡರ್​​​​​ನ ಐಎಎಸ್​​ ಅಧಿಕಾರಿಯಾಗಿದ್ದ ಮಹಾಂತೇಶ್​​​​ ಅವರು ಮೂಲತಃ ರಾಮದುರ್ಗದವರು. ದಾವಣಗೆರೆಯ ಡಿಸಿಯಾಗುವ ಮುನ್ನ ಧಾರವಾಡದ ಎಸಿಯಾಗಿದ್ದರು. ಇದಕ್ಕೂ ಮೊದಲು ಅವರು ಧಾರವಾಡದಲ್ಲಿ ಇಂಗ್ಲಿಷ್​​​​​​​​​​ ಟ್ಯೂಷನ್​​ ಹೇಳುತ್ತಿದ್ದರು. ದಾವಣಗೆರೆಯ ಡಿಸಿಯಾದ ನಂತರ ಅವರು ಬೆಂಸ್ಕಾಂನ ಎಂಡಿ (ವ್ಯವಸ್ಥಾಪಕ ನಿರ್ದೇಶಕ) ಯಾಗಿ ನೇಮಕವಾಗಿದ್ದರು.

Post a Comment

0 Comments