Ticker

6/recent/ticker-posts

Ad Code

ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಆಹಾರಕ್ಕಾಗಿ ಸ್ಟಾರ್ಟ್ಅಪ್ ಔಟ್ ಲೆಟ್ ಆರಂಭ

 

ತಿರುವನಂತಪುರ : ಪ್ರಯಾಣಿಕರು ತಮ್ಮ ಪಿಎನ್ಆರ್ ಸಂಖ್ಯೆಯನ್ನು ಬಳಸಿಕೊಂಡು ಮುಂಚಿತವಾಗಿ ಆಹಾರವನ್ನು ಆರ್ಡರ್ ಮಾಡುವ ಸೌಲಭ್ಯವನ್ನು ಕೆ ಎಸ್ ಆರ್ ಟಿ ಸಿ  ಆರಂಭಿಸಿದೆ. ರೈಲ್ ರೋಲ್ಸ್ ಸ್ಟಾರ್ಟ್ಅಪ್ ಕಂಪನಿಯ ಸಹಯೋಗದೊಂದಿಗೆ ತೊಡಗಲಾದ ಈ ನೂತ‌ನ ವ್ಯವಸ್ಥೆಯಂತೆ ಬಸ್ಸಿನಲ್ಲಿ ಟಿಕೆಟ್ ಬುಕ್ ಮಾಡುವಾಗ ಆಹಾರವನ್ನು ಆರ್ಡರ್ ಮಾಡುವ ಆಯ್ಕೆಯನ್ನು ಕೆ ಎಸ್ ಆರ್ ಟಿ ಸಿ  ಒದಗಿಸುತ್ತದೆ. ಅಗತ್ಯವಿದ್ದರೆ ಅದನ್ನು ನೇರವಾಗಿ ಸೀಟಿಗೆ ತಲುಪಿಸಲಾಗುತ್ತದೆ. ಅಲ್ಲದೆ ಆರ್ಡರ್  ಆಹಾರವನ್ನು ಔಟ್ಲೆಟ್ ನಿಂದಲೂ ಖರೀದಿಸಬಹುದು. ಮೊದಲ ಔಟ್ಲೆಟ್ ಅನ್ನು  ತಿರುವನಂತಪುರಂನ ಸೆಂಟ್ರಲ್ ಡಿಪೋದಲ್ಲಿ ತೆರೆಯಲಾಯಿತು. ಮುಂದಿನ ದಿನಗಳಲ್ಲಿ ಇದನ್ನು ಕೊಟ್ಟಾರಕ್ಕರ, ಕೊಲ್ಲಂ ಮತ್ತು ಎರ್ನಾಕುಲಂ ಡಿಪೋಗಳಲ್ಲಿಯೂ ತೆರೆಯಲಾಗುವುದು. ಫೆಬ್ರವರಿಯಲ್ಲಿ ಅಲುವಾ, ಅಲಪ್ಪುಳ, ಕಣ್ಣೂರು, ಕಾಸರಗೋಡು, ಪಾಲಕ್ಕಾಡ್ ಮತ್ತು ಕೊಟ್ಟಾಯಂ ಡಿಪೋಗಳಲ್ಲಿಯೂ ಔಟ್ಲೆಟ್ ಗಳನ್ನು ತೆರೆಯಲಾಗುವುದು. ಕೆ ಎಸ್ ಆರ್ ಟಿ ಸಿ ರೈಲ್ ರೋಲ್ಸ್ ಗೆ 10 ಡಿಪೋಗಳಲ್ಲಿ ಔಟ್ಲೆಟ್ ಗಳನ್ನು ಪ್ರಾರಂಭಿಸಲು ಅನುಮತಿ ನೀಡಿದೆ. ಆಹಾರವು ಆರೋಗ್ಯಕರ ಪ್ಯಾಕಿಂಗ್ ನಲ್ಲಿರುತ್ತದೆ. ಆದ್ದರಿಂದ ಆಸನ ಅಥವಾ ಸುತ್ತಮುತ್ತಲಿನ ಪ್ರದೇಶಗಳು ಕೊಳಕಾಗುವುದಿಲ್ಲ. ಬಸ್‌ನೊಳಗೆ ಸ್ಥಾಪಿಸಲಾದ ವಿಶೇಷ ತ್ಯಾಜ್ಯ ತೊಟ್ಟಿಯಲ್ಲಿ ಇಡಬೇಕು. ಎಲ್ಲಾ ರೀತಿಯ ಬಸ್‌ಗಳಲ್ಲಿ ಆಹಾರವನ್ನು ತಲುಪಿಸಲಾಗುತ್ತದೆ ಎಂಬುದಾಗಿ ಸಚಿವ ಕೆ.ಬಿ. ಗಣೇಶ್‌ಕುಮಾರ್ ತಿಳಿಸಿದರು.

Post a Comment

0 Comments