ಪೆರ್ಲ :ಮಣಿಯಂಪಾರೆ ದುರ್ಗಾನಗರದ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯದಂಗವಾಗಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ ವೇದಮೂರ್ತಿ ಚಂದ್ರಶೇಖರ ನಾವಡ ಬಜಕೂಡ್ಲು ಅವರ ಮಾರ್ಗದರ್ಶನದಲ್ಲಿ ಜರಗಿತು.ಇದರಂಗವಾಗಿ ಬೆಳಗ್ಗೆ ಮಂದಿರದಲ್ಲಿ ಗಣಹೋಮ, ಅನುಜ್ಞ ಕಲಶಾದಿ ಕಾರ್ಯಗಳು ನಡೆದವು. ಈ ಸಂದರ್ಭದಲ್ಲಿ ಮಂದಿರದ ಸ್ಥಾಪಕ ಸದಸ್ಯ ಗೋವಿಂದ ನಾಯ್ಕ ಅರೆಮಂಗಿಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಂಞಣ್ಣ ಮಾಸ್ತರ್ ನೆಕ್ಕರೆಪದವು, ಕೋಶಾಧಿಕಾರಿ ಉದಯ ಚೆಟ್ಟಿಯಾರ್ ಪೆರ್ಲ,ಸೇವಾ ಸಮಿತಿಯ ಅಧ್ಯಕ್ಷ ಅನಂದ ಅರೆಮಂಗಿಲ,ರಾಮಕೃಷ್ಣ ಗುರುಸ್ವಾಮಿ ಮತ್ತು ಶಿಷ್ಯಂದಿರು ಹಾಗೂ ಸಮಿತಿ ಸದಸ್ಯರು, ಊರ ಸಮಸ್ತರು ಪಾಲ್ಗೊಂಡಿದ್ದರು.

0 Comments