Ticker

6/recent/ticker-posts

Ad Code

ಮಾನ್ಯದ ಕಾಂಗ್ರೆಸ್ ಕಾರ್ಯಕರ್ತ ಅಸೌಖ್ಯದಿಂದ ಮೃತ್ಯು

 

ನೀರ್ಚಾಲ್ : ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿದ್ದಾನೆ.ಮಾನ್ಯ ಉನ್ನತಿಯ  ದಿ. ಗುರು ಮತ್ತು ಮಾಣಿಕ ದಂಪತಿಯ ಪುತ್ರ ವಿಶ್ವನಾಥ್ (46) ಮೃತಪಟ್ಟಿದ್ದಾರೆ. ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದಾಗಿ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮಧ್ಯಾಹ್ನ ಅನಾರೋಗ್ಯ ಉಲ್ಬಣಗೊಂಡ ನಂತರ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ಅವರು ನಿಧನರಾದರು. ಕಾಂಗ್ರೆಸ್ ಕಾರ್ಯಕರ್ತರಾಗಿರುವ ವಿಶ್ವನಾಥ್ ಅವಿವಾಹಿತರಾಗಿದ್ದಾರೆ. ಸಹೋದರ ಸಹೋದರಿಯರಾದ ರಾಮಚಂದ್ರ, ಆನಂದ, ಶಂಕರ, ಕಮಲ, ಲೀಲಾವತಿ, ಸಂಜೀವ ಎಂಬಿವರನ್ನಗಲಿದ್ದಾರೆ.

Post a Comment

0 Comments