ಪಶ್ಚಿಮ ಬಂಗಾಳ : ಅಡುಗೆ ಅನಿಲದ ತೀವ್ರ ಕೊರತೆಯಿಂದಾಗಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಬದಲು ಮಕ್ಕಳಿಗೆ ಪಾನಿಪುರಿ ವಿತರಿಸಿದ ವಿಚಿತ್ರ ಘಟನೆಯೊಂದು ಪ. ಬಂಗಾಳದ ಭದ್ರಕಾಳಿ ಹೈಸ್ಕೂಲ್ನಲ್ಲಿ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನದ ಪೌಷ್ಟಿಕ ಆಹಾರ ತಯಾರಿಸಲು ಗ್ಯಾಸ್ ಇಲ್ಲದ ಕಾರಣ, ಶಾಲಾ ಆಡಳಿತ ಮಂಡಳಿಯು ಹೊರಗಿನ ಪಾನಿಪುರಿ ಮಾರಾಟಗಾರನ ಮೂಲಕ ವಿದ್ಯಾರ್ಥಿಗಳಿಗೆ 'ಗೋಲ್ಗಪ್ಪಾ' (ಪಾನಿಪುರಿ) ವಿತರಿಸಿದೆ.
ಈ ಘಟನೆಯು ಶಾಲಾ ಮಕ್ಕಳ ಪೌಷ್ಟಿಕಾಂಶದ ಮೇಲೆ ಬೀರುವ ಪರಿಣಾಮ ಹಾಗೂ ದೇಶದಲ್ಲಿ ಎದುರಾಗಿರುವ ಇಂಧನ ಬಿಕ್ಕಟ್ಟಿನ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಎತ್ತಿದೆ. ಅಕ್ಕಿ-ಬೇಳೆಯ ಊಟದ ಬದಲು ಬೀದಿಬದಿಯ ತಿಂಡಿ ನೀಡುತ್ತಿರುವುದಕ್ಕೆ ಪೋಷಕರು ಮತ್ತು ಶಿಕ್ಷಣ ತಜ್ಞರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

0 Comments