ಕಾಸರಗೋಡು : ಇಲ್ಲಿನ ಸೇವಾ ಸಹಕಾರಿ ಬ್ಯಾಂಕ್ ಹಾಲ್ ನಲ್ಲಿ ಜರಗಿದ ಕಾಸರಗೋಡು ಕನ್ನಡ ಸಮ್ಮೇಳನವನ್ನು ಜಿಲ್ಲಾ ಗಮಕ ಪರಿಷತ್ತು ಅಧ್ಯಕ್ಷ ಟಿ ಶಂಕರನಾರಾಯಣ ಭಟ್ ಉದ್ಘಾಟಿಸಿದರು. 'ಸಮನ್ವಯ'ದ 28ನೇ ವಾರ್ಷಿಕೋತ್ಸವದ ಅಂಗವಾಗಿ ಜರಗಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಕನ್ನಡಿಗರು ಒಗ್ಗಟ್ಟಾಗಿರಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಕನ್ನಡ ವಿದ್ಯಾರ್ಥಿ ನಾಯಕ ಎ ಡಿ ಜಿ ಬೆಳ್ಚಾಡ 'ಇಲ್ಲಿ ಕನ್ನಡಿಗರು ಸುತರಾಂ ನಿರಾಶೆಗೊಳ್ಳಬೇಕಿಲ್ಲ' ಎಂದರು. ಚಂದ್ರ ಶೇಖರ ಬೀರಂತಬೈಲು, ಸಂತೋಷ್ ಬಂದ್ಯೋಡು, ಪ್ರಶಾಂತಿ ಮೊದಲಾದವರು ಮಾತನಾಡಿದರು.

0 Comments