ಪೆರ್ಲ : ಇತಿಹಾಸ ಪ್ರಸಿದ್ಧ ನೆಲ್ಲಿಕುಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮನೆ ಮನೆಗೆ ಆಮಂತ್ರಣ ಹಂಚಿ ಆಹ್ವಾನಿಸುವ ಮಹಾ ಸಂಪರ್ಕ ಅಭಿಯಾನ ಅಂತಿಮ ಹಂತದಲ್ಲಿದೆ. ವಿವಿಧ ಸಮಿತಿಗಳ ನೇತೃತ್ವದಲ್ಲಿ ಪ್ರಮುಖ ಪದಾಧಿಕಾರಿಗಳು ಪಾಲ್ಗೊಂಡರು. ಇದೇ ಬರುವ ಮಾರ್ಚ್ 29 ರಿಂದ ಎಪ್ರಿಲ್ 3ನೇ ತಾರೀಕಿನವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದನ್ನು ಯಶಸ್ವಿಗೊಳಿಸಲು ಹಲವಾರು ಸ್ವಯಂ ಸೇವಕರು ಕ್ಷೇತ್ರದಲ್ಲಿ ನಿತ್ಯವೂ ಶ್ರಮದಾನ ನಿರತರಾಗಿದ್ದಾರೆ.

0 Comments