Ticker

6/recent/ticker-posts

Ad Code

ತೋಟದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಸಾವು

 

ಮುಳ್ಳೇರಿಯ : ತೋಟವೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ  ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರನ್ನು ಕಣ್ಣೂರಿನ ಅಳಕೋಡ್‌ನ ಉದಯಗಿರಿಯ ಮೂಲದವರು ಮತ್ತು ಕಾರಡ್ಕ  ನೆಚ್ಚಿಪಡುಪ್ಪು  ನೀರೋಲಿಪಾರ ನಿವಾಸಿಯಾದ ಎ.ಡಿ. ದೇವಸ್ಯ (72) ಎಂದು ಗುರುತಿಸಲಾಗಿದೆ. 

ಹಿಂದಿನ ದಿನ ಗೇರುಬೀಜ ಕೊಯ್ಯಲು  ಹೋಗಿದ್ದ ದೇವಸ್ಯ ಸಂಜೆ ವೇಳೆಗೆ ತೋಟದಲ್ಲಿ ಅಸ್ವಸ್ಥರಾಗಿ  ಪತ್ತೆಯಾಗಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವ ಉಳಿಸಲಾಗಲಿಲ್ಲ. ಮೃತರು ಪತ್ನಿ ಎಲ್ಸಿ, ಮಗ ಜಿನ್ಸ್ ಸೆಬಾಸ್ಟಿಯನ್ ಸೊಸೆ ಸೋನಿಯಾ, ಸಹೋದರ ಥಾಮಸ್ ಆಮಕ್ಕಾಟ್ಟ್  ಮುಂಡೋಲ್ ಎಂಬಿವರನ್ನಗಲಿದ್ದಾರೆ.

Post a Comment

0 Comments