Ticker

6/recent/ticker-posts

Ad Code

ಪೆರ್ಲದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ : ಹಿಂದೂ ನಾಯಕರ ಭೇಟಿ ಉನ್ನತ ತನಿಖೆಗೆ ಆಗ್ರಹ

ಪೆರ್ಲ : ಮತಾಂತರ ಯತ್ನದ ಬಗ್ಗೆ ಪ್ರಶ್ನಿಸಿದ  ಹಿಂದೂ ಕಾರ್ಯಕರ್ತನ ಮೇಲೆ ಪೇಟೆಯ ಅಂಗಡಿಯೊಂದರಲ್ಲಿ ಹಲ್ಲೆ ನಡೆದಿರುವ . ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವಿನಾಶ್ (23) ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಹಿನ್ನೆಲೆಯಲ್ಲಿ  ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪುತ್ತೂರು ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಅವಿನಾಶ್ ಅವರ ಆರೋಗ್ಯ ವಿಚಾರಿಸಿತು. ಗಾಯಾಳುವಿಗೆ ಧೈರ್ಯ ತುಂಬಿದ ನಿಯೋಗದ ಸದಸ್ಯರು ಘಟನೆ ಕುರಿತು ಮಾಹಿತಿ ಪಡೆದುಕೊಂಡು ಉನ್ನತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Post a Comment

0 Comments