ಬದಿಯಡ್ಕ : ಸಾಮ್ರಾಟ್ ಮಾನ್ಯ ಇದರ ಆಶ್ರಯದಲ್ಲಿ ನಡೆದ 80 ನೇ ಸ್ವಾತಂತ್ರ ಕಾರ್ಯಕ್ರಮದಲ್ಲಿ ಸಂಸ್ಥೆ ಯ ಹಿರಿಯ ಸದಸ್ಯ ಸುಬ್ರಹ್ಮಣ್ಯ ಡಿ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ. ಪಂಚಾಯತ್ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ. ಮಾನ್ಯ ಜ್ಞಾನೋದಯ ಶಾಲಾ ಪ್ರಬಂಧಕ ನಿತ್ಯಾನಂದ ಎಂ.ಆರ್, ರಂಜಿತ್ ಯಾದವ್, ಸಂಸ್ಥೆಯ ಅಧ್ಯಕ್ಷ ಐತಪ್ಪ ನಾಯ್ಕ್ ಹಾಗೂ ಹಿರಿಯ ಕಿರಿಯ ಸದಸ್ಯರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಲ್ಲಾ ವಿಭಾಗದಲ್ಲಿ ಎ ಪ್ಲಸ್ ಗಳಿಸಿದ ಯಶಸ್ವಿನಿ ದೇವರಕೆರೆ ಹಾಗೂ ಮಾಸ್ಟರ್ ಶ್ರವಣ್ ಮುಂಡೋಡು ಇವರನ್ನು ಅಭಿನಂದಿಸಲಾಯಿತು.

0 Comments