ಪೆರ್ಲ : ಸ್ವರ್ಗ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಕ್ಕೆಬೆಟ್ಟು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಧರ ಕಡಂಬಳಿತ್ತಾಯ ಪಂಬೆತ್ತಡ್ಕ ಧ್ವಜಾರೋಹಣ ನಡೆಸಿದರು. ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಎಸ್, ಉಪಾಧ್ಯಕ್ಷೆ ಚಂದ್ರಾವತಿ ಎಂ , ಸಮಿತಿ ಸದಸ್ಯರಾದ ರಾಕೇಶ್ ಬೈರಡ್ಕ, ರವೀಂದ್ರ ಮಣಿಯಾಣಿ ಅಜಕ್ಕಳಮೂಲೆ, ಈಶ್ವರ ಪ್ರಸಾದ್ ಪಂಬೆತ್ತಡ್ಕ, ಮಹೇಶ್ ಬಿ ಬೈರಡ್ಕ, ಗ್ರಂಥಪಾಲಕಿ ಅನಿತಾ ಕೆ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಾಲಯದ ಕಾರ್ಯದರ್ಶಿ ರವಿ ವಾಣಿನಗರ ಸ್ವಾಗತಿಸಿದರು.

0 Comments