ಬದಿಯಡ್ಕ : ಪುತ್ರಕಳ ಬೂಡು ನಾಗ ಸಾನಿಧ್ಯದಲ್ಲಿ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು. ಹರಿನಾರಾಯಣ ಮುನಿಯೂರು ಅವರ ಪೌರೋಹಿತ್ಯದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ, ಕ್ಷೀರಾಭಿಷೇಕ ನಡೆಸಲಾಯಿತು. ಪುತ್ರಕಳ ಬೂಡು ಕುಟುಂಬಸ್ಥರು, ಊರವರು ಭಾಗವಹಿಸಿ ನಾಗದೇವರಿಗೆ ಹಾಲು, ಎಳನೀರು ಸಮರ್ಪಿಸಿ ಕೃತಾರ್ಥರಾದರು.

0 Comments