ಕಾಸರಗೋಡು : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ 77ನೇ ಜನ್ಮದಿನದ ಅಂಗವಾಗಿ ಇಂದು ಬೆಳಗ್ಗೆ ನೀಲೇಶ್ವರ ಶ್ರೀ ಗಣೇಶ ಮಂದಿರದಲ್ಲಿ ಅವರ ಮತ್ತು ಕುಟುಂಬದವರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ನಡೆಯಿತು. ಗಣೇಶ ಮಂದಿರದ ಟ್ರಸ್ಟಿ ಅಧ್ಯಕ್ಷ ಎನ್.ಎಸ್.ಪೈ, ಉದಯಶಂಕರ ಪೈ. ಕಾರ್ಯಾಧ್ಯಕ್ಷ ರಾಮಚಂದ್ರನ್ ಮತ್ತು ದೇವಸ್ಥಾನದ ಖಜಾಂಚಿ ನಾರಾಯಣನ್, ವಿಶ್ವನಾಥನ್, ಪೊಂಗಲ ವಿಜಯನ್ ಹಾಗೂ ಹರೀಶ್ ಉಪಸ್ಥಿತರಿದ್ದರು.

0 Comments