ಬದಿಯಡ್ಕ : ತ್ರಿಸ್ತರ ಪಂಚಾಯತು ಚುನಾವಣೆ ಪ್ರಚಾರ ಬಿರುಸುಗೊಳ್ಳುತ್ತಿದ್ದಂತೆಬದಿಯಡ್ಕ ಪಂಚಾಯತು ಬಿಜೆಪಿ ಅಭ್ಯರ್ಥಿಗಳಾದ ಸರೋಜಿನಿ ಮಾನ್ಯ(15ನೆ ವಾರ್ಡ್ ಚೆಡೆಕಲ್), ಅಶ್ವಿನಿ ಮೊಳೆಯಾರು(13ನೆ ವಾರ್ಡ್ ಪೆರಡಾಲ), ಪುನೀತ್ ಮಾನ್ಯ(17ನೆ ವಾರ್ಡ್ ಮಾನ್ಯ) ಹಾಗೂ ನೀರ್ಚಾಲು ಡಿವಿಷನ್ ಬ್ಲೋಕ್ ಪಂಚಾಯತ್ ಅಭ್ಯರ್ಥಿ ಮಹೇಶ್ ವಳಕುಂಜ ಮೊದಲಾದವರು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು. ಹಿರಿಯ ನ್ಯಾಯವಾದಿ ಎಂ. ನಾರಾಯಣ ಭಟ್, ಸಂತೋಷ್ ಕುಮಾರ್ ಮಾನ್ಯ, ಗಣೇಶ್ ಕೃಷ್ಣ ಅಳಕ್ಕೆ ಮೊದಲಾದವರು ಉಪಸ್ಥಿತರಿದ್ದರು.

0 Comments