ಉಪ್ಪಳ : ಪಾವೂರು ಮುಡಿಮಾರು ಶ್ರೀಮಲರಾಯ ಗುಳಿಗ ದೈವಗಳ ವಾರ್ಷಿಕ ನೇಮೋತ್ಸವವು ಡಿ.26 ಶುಕ್ರವಾರ ನಡೆಯಲಿರುವುದು. ಆ ಪ್ರಯುಕ್ತ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಮಲರಾಯ ದೈವದ ಪ್ರಧಾನ ಅರ್ಚಕರಾದ ಶ್ರೀಯುತ ಚಂದ್ರಹಾಸ ಪೂಜಾರಿ ಮುಡಿಮಾರು ಇವರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕ್ಷೇತ್ರದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ರವಿಮುಡಿಮಾರು, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷರಾದ ಚಂದ್ರಹಾಸ ಕೆದುಂಬಾಡಿ, ಕೋಶಾಧಿಕಾರಿ ಮೋಹನ್ ಮುಡಿಮಾರು, ಸದಸ್ಯರಾದ ನವೀನ್ ಮುಡಿಮಾರು, ದೇವದಾಸ್ ಮುಡಿಮಾರು, ಪ್ರಕಾಶ್ ಕುಮಾರ್ ಮುಡಿಮಾರು, ಉಮೇಶ್ ಮುಡಿಮಾರು, ಶಿವರಾಮ ಮುಡಿಮಾರು, ನಾರಾಯಣ ಮುಡಿಮಾರು, ಮಿಥಿಲ್ ಮುಡಿಮಾರ್ ಮೊದಲಾದವರು ಉಪಸ್ಥಿತರಿದ್ದರು,

0 Comments