Ticker

6/recent/ticker-posts

Ad Code

ಹೊಲಿಗೆ ಕಾರ್ಮಿಕರ ಪಿಂಚಣಿಗೆ ಅಧಿವೇಶನದಲ್ಲಿ ನ್ಯಾಯ ದೊರಕಿಸಿ ಕೊಡುವುದಾಗಿ ಶಾಸಕ ಎಕೆಎಂ ಅಶ್ರಫ್ ಭರವಸೆ

ಹೊಸಂಗಡಿ: ಕೇರಳ ರಾಜ್ಯ ಹೊಲಿಗೆ ಕಾರ್ಮಿಕರಿಗೆ ಟೈಲರಿಂಗ್ ವೆಲ್ಫೇರ್ ಫಂಡ್  ಕಾಯ್ದೆ ಪ್ರಕಾರ ಕ್ಷೇಮನಿಧಿಯಲ್ಲಿ ನೋಂದಾಯಿಸಿಕೊಂಡರೂ ಪರಿಷ್ಕೃತ  ಕಾನೂನು ವಿಧೇಯ ಪಿಂಚಣಿ ದೊರೆಯದೇ ಇರುವ ಸಮಸ್ಯೆಯನ್ನು ತಾನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ನ್ಯಾಯ ದೊರಕಿಸಿ ಕೊಡುವುದಾಗಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಭರವಸೆ ಇತ್ತರು. ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆದ ಕೇರಳ ಸ್ಟೇಟ್ ಟೖಲರ್ಸ್ ಅಸೋಸಿಯೇಷನ್ ಮಂಜೇಶ್ವರ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷೇಮನಿಧಿ ಯೋಜನೆಯಲ್ಲಿ ಸೀನಿಯಾರಿಟಿಯಂತೆ ಪಿಂಚಣಿ ನೀಡುವ ವ್ಯವಸ್ಥೆ ಅಳವಡಿಸಿಲ್ಲ ಮತ್ತು ಅಂಶಾದಾಯಕ್ಕೆ ಅನುಗುಣವಾಗಿ ಪಿಂಚಣಿ ಲಭಿಸುತ್ತಿಲ್ಲ ಎಂದು ಹೊಲಿಗೆ ಕಾರ್ಮಿಕರು ಶಾಸಕರಲ್ಲಿ ಮನವಿ ಸಲ್ಲಿಸಿ ವಿನಂತಿಸಿದರು. ಕ್ಷೇಮನಿಧಿ ಕಚೇರಿಯು ಸಮರ್ಪಕ ಕಾರ್ಯ ನಿರ್ವಹಿಸದೇ ಟೖಲರಿಂಗ್ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದೆ. ಜತೆಯಲ್ಲೇ ರೆಡಿಮೇಡ್ ಬಟ್ಟೆಬರೆಗಳಿಗೆ ಲಂಗುಲಗಾಮಿನ ತೆರಿಗೆಗಳಿಲ್ಲದೇ ಮಾರಾಟವಾಗುವುದರಿಂದ ಟೖಲರಿಂಗ್  ವೃತ್ತಿ ಕ್ಷೇತ್ರವೇ ಆತಂಕದಲ್ಲಿದೆ ಎಂದು ಸಮ್ಮೇಳನ ಅಭಿಪ್ರಾಯಪಟ್ಟಿದೆ. ಕೆ. ಎಸ್. ಟಿ. ಎ ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ ಅಧ್ಯಕ್ಷತೆ ವಹಿಸಿದರು. ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ರಾಮನ್ ಚೆನ್ನಿಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಯು. ಶಂಕರನ್, ರಾಜ್ಯ ಕಾರ್ಯದರ್ಶಿ ಮೋಹನ್ ದಾಸ್ ಕುಂಬಳೆ, ಜಿಲ್ಲಾಧ್ಯಕ್ಷ ಹಾಗೂ ವೆಲ್ಫೇರ್ ಮಂಡಳಿ ಸದಸ್ಯ ಸುರೇಶ್ ಭಟ್, ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್ ಅತಿಥಿಗಳಾಗಿ ಪಾಲ್ಗೊಂಡರು. ಸಂಘಟನಾ ಪ್ರಮುಖರಾದ ನಾರಾಯಣ ಕುಂಬಳೆ, ಗಣೇಶ್ ಪಾವೂರು, ಚಂದ್ರನ್ ಪೆರ್ಲ, ಕೇಶವ ಮಯ್ಯ, ವಿನೋದ್ ಕುಂಬಳೆ, ಶುಭಾಶಂಸನೆ ಮಾಡಿದರು. ತಾಲೂಕು ಘಟಕ ಅಧ್ಯಕ್ಷ ದಯಾನಂದ ಪಿ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಎಂ. ಸತೀಶ ಆಚಾರ್ಯ ವರದಿ ಮಂಡಿಸಿದರು. ವಿಜಯ ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ಸಂತೋಷ ಶೆಟ್ಟಿ ವಂದಿಸಿದರು. 

Post a Comment

0 Comments