Ticker

6/recent/ticker-posts

Ad Code

ನೀರ್ಚಾಲು ಶಾಲೆಯ ಕಲೋತ್ಸವ ಪ್ರತಿಭೆಗಳಿಗೆ ಅಭಿನಂದನಾ ಕಾರ್ಯಕ್ರಮ

 

ನೀರ್ಚಾಲು :  ಮುಳ್ಳೇರಿಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್.ಪಿ ವಿಭಾಗದ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಶಿಪ್ ಮತ್ತು ಕನ್ನಡ ವಿಭಾಗದ ಸ್ಪರ್ಧೆಗಳಲ್ಲಿ  ರನ್ನರ್ ಅಪ್ ಚಾಂಪಿಯನ್ ಶಿಪ್ ಪಡೆದು ಸಾಧನೆ ಮಾಡಿದ ಮಹಾಜನ ಸಂಸ್ಕೃತ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮತ್ತು ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಪ್ರಶಾಂತ್ ಕುಮಾರ್ ವಹಿಸಿದರು.  ಮುಖ್ಯ ಅತಿಥಿಯಾಗಿ ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು.  ಮಾತೃ ಮಂಡಳಿ ಅಧ್ಯಕ್ಷೆ  ಕಾವ್ಯಶ್ರೀ ಮಾತನಾಡಿದರು. ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕಲೋತ್ಸವ ಮತ್ತು ಶಾಸ್ತ್ರೋತ್ಸವದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು.  ಮುಖ್ಯೋಪಾಧ್ಯಾಯಿನಿ  ಮಾಲತಿ ವೈ ಸ್ವಾಗತಿಸಿ.  ಶಿಕ್ಷಕಿ ಕುಮಾರಿ ವೈಷ್ಣವಿ ವಂದಿಸಿದರು. ಶಿಕ್ಷಕಿ ಕುಮಾರಿ ವೀಕ್ಷಿತ  ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಮಕ್ಕಳಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.

Post a Comment

0 Comments