ಕಾಸರಗೋಡು : ಸೇವಾಭಾರತಿ ಆಶ್ರಯದಲ್ಲಿ ಚಿಟ್ಟಿಲಪಳ್ಳಿ ಫೌಂಡೇಶನ್ ಸಹಕಾರದೊಂದಿಗೆ ಜಾರಿಗೊಳಿಸುವ ವಸತಿ ನಿರ್ಮಾಣ ಯೋಜನೆಯಂತೆ ಕಳ್ಳಾರ್ ಪಂಚಾಯತಿನ ಚುಳ್ಳಿಯೋಡಿಯ ಮುಹಮ್ಮದ್ ಯೂನಸ್ - ಸುಹರ ದಂಪತಿಗೆ ಮನೆ ಸಿದ್ದವಾಗುತ್ತಿದೆ. ಮನೆ ನಿರ್ಮಾಣದ ಮೊದಲ ಹಂತವೆಂಬಂತೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕಳ್ಳಾರ್ ಜುಮಾ ಮಸೀದಿ ಉಸ್ತಾದ್ ಅಬ್ದುಲ್ ಸಮದ್ ಅಶ್ರಫಿ ಶಿಲಾನ್ಯಾಸ ನೆರವೇರಿಸಿದರು. ಸೇವಾ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣನ್, ಪದಾಧಿಕಾರಿಗಳಾದ ತಂಬಾನ್ ಮಂಜಂಗಾನಂ, ರಶ್ಮಿ.ಕೆ.ಪಿ, ಗೋಪಿನಾಥನ್, ಸಂತೋಷ್ ಕುಮಾರ್, ಚಂದ್ರಮೌಳಿ, ಆರ್.ಎಸ್.ಎಸ್.ಜಿಲ್ಲಾ ಪ್ರಚಾರಕ್ ರಂಜಿತ್, ಖಂಡ ಸೇವಾ ಪ್ರಮುಖ್ ದಿಲೀಪ್, ಮುಹಮ್ಮದ್ ಯೂನಸ್ ರವರ ಕುಟುಂಬ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದರು. ನಾಲ್ಕು ತಿಂಗಳೊಳಗೆ ಮನೆ ನಿರ್ಮಾಣ ಪೂರ್ಣಗೊಳಿಸಲು ನಿರ್ದರಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

0 Comments