ಪೆರ್ಲ : ಪಂಚಾಯತ್ ಅಭಿವೃದ್ಧಿ ಹಾಗೂ ಜನಪರ ಆಶೋತ್ತರಗಳ ಚರ್ಚೆಗಾಗಿ ಎಣ್ಮಕಜೆ ಪಂಚಾಯತ್ ಆಡಳಿತ ಸಮಿತಿಯು ಪತ್ರಕರ್ತರೊಂದಿಗೆ ಆಪ್ತ ಸಂವಾದ ನಡೆಸಿತು. ಪಂಚಾಯತ್ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಂ.ಅಧ್ಯಕ್ಷೆ ಕುಸುಮಾವತಿ ಬಿ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ವಳಮುಗೇರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಧಾಕೃಷ್ಣ ನಾಯಕ್ ಜೆ.ಎಸ್, ವಿಜಯ ಕೆ, ರಮ್ಲ, ಸಹಾಯಕ ಕಾರ್ಯದರ್ಶಿ ಗಿರೀಶ್ ಮೊದಲಾದವರು ಮಾತನಾಡಿದರು. ವಿವಿಧ ಮಾಧ್ಯಮಗಳ ಪ್ರಾದೇಶಿಕ ವರದಿಗಾರರು ಭಾಗವಹಿಸಿ, ಗ್ರಾಮದ ಪ್ರಗತಿಯ ಕುರಿತು ಸಕಾರಾತ್ಮಕ ಚರ್ಚೆ ನಡೆಸಿದರು.

0 Comments