ನೀರ್ಚಾಲು: ಕಾರು ಅಪಘಾತದಲ್ಲಿ ಏಳು ವರ್ಷದ ಬಾಲಕನೋರ್ವ ಮೃತಪಟ್ಟ ಬಗ್ಗೆ ವರದಿಯಾಗಿದೆ. ಕೊಲ್ಲಂಗಾನ ಸಮೀಪದ ಎವುಂಜೆಯ ಸಿದ್ದಿಕ್ ಮತ್ತು ಶಮ್ಸಿನಾ ದಂಪತಿಯ ಪುತ್ರ ಅಹ್ಮದ್ ಜಾಕೀರ್ ಮೃತಪಟ್ಟಿದ್ದಾನೆ. ಇಂದು (ಶನಿವಾರ) ಮಧ್ಯಾಹ್ನ ತನ್ನ ತಾಯಿಯೊಂದಿಗೆ ಸಾಮಾಗ್ರಿಗಳನ್ನು ಖರೀದಿಸಲು ಕೊಲ್ಲಂಗಾನಕ್ಕೆ ತಲುಪಿ ರಸ್ತೆ ದಾಟುತ್ತಿದ್ದಾಗ ಕಾಸರಗೋಡಿನಿಂದ ಮಾನ್ಯಕ್ಕೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅವರನ್ನು ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವವನ್ನು ಉಳಿಸಲಾಗಲಿಲ್ಲ. ಬೇಳ ಕಿಳಿಂಗಾರ್ ಬಡ್ಸ್ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಶಮಿಲ್ ಮತ್ತು ಸಾಹಿರ್ ಸಹೋದರರಾಗಿದ್ದಾರೆ.

0 Comments